ಅರವಿಂದ್ ಕೇಜ್ರಿವಾಲ್ ಪುತ್ರಿ ಅಪಹರಣಕ್ಕೆ ಬೆದರಿಕೆ ಪತ್ರ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿಯನ್ನು ಅಪಹರಿಸುವುದಾಗಿ ಬೆದರಿಕೆ ಪತ್ರ ಅಪರಿಚಿತರಿಂದ ಕೇಜ್ರಿವಾಲ್ ಕಚೇರಿಗೆ ಬಂದಿರುವ ಇ- ಮೇಲ್ ನಲ್ಲಿ ಅವರ ಪುತ್ರಿಯನ್ನು ಅಪಹರಿಸುವುದಾಗಿ ಬೆದರಿಕೆ ಹಾಕಲಾಗಿದೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿಯನ್ನು ಅಪಹರಿಸುವುದಾಗಿ ಬೆದರಿಕೆ ಪತ್ರ ಅಪರಿಚಿತರಿಂದ  ಕೇಜ್ರಿವಾಲ್ ಕಚೇರಿಗೆ ಬಂದಿರುವ ಇ- ಮೇಲ್ ನಲ್ಲಿ  ಅವರ ಪುತ್ರಿಯನ್ನು ಅಪಹರಿಸುವುದಾಗಿ ಬೆದರಿಕೆ ಹಾಕಲಾಗಿದೆ.

ಜನವರಿ 9 ರಂದು ಬಂದಿರುವ ಬೆದರಿಕೆ ಇ- ಮೇಲ್ ನನ್ನು  ದೆಹಲಿಯ ಪೊಲೀಸ್ ಆಯುಕ್ತ ಅಮೂಲ್ಯ ಪಾಟ್ನಯಕ್ ಅವರಿಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆದರಿಕೆ  ಇ- ಬಂದಿರುವುದನ್ನು ದೆಹಲಿ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದು, ಅದನ್ನು ಸೈಬರ್ ವಿಭಾಗದ ವಿಶೇಷ ಘಟಕ್ಕೆ ವರ್ಗಾಯಿಸಲಾಗಿದೆ. ಯಾವ ಇ- ಮೇಲ್ ಖಾತೆಯಿಂದ ಈ ಕರೆ ಬಂದಿದೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಉತ್ತರ ಜಿಲ್ಲೆಯ ಪೊಲೀಸರಿಂದ ಕೇಜ್ರಿವಾಲ್ ಮಗಳಿಗೆ ಭದ್ರತೆ ಒದಗಿಸಲಾಗಿದೆ.

ಮೂರು ದಿನಗಳ ಹಿಂದೆಯೇ  ದೆಹಲಿ ಸರ್ಕಾರ ಬೆದರಿಕೆಯ ಇ- ಮೇಲ್ ನ್ನು ಪೊಲೀಸ್ ಆಯುಕ್ತರಿಗೆ ವರ್ಗಾಯಿಸಿರುವುದಾಗಿ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರಿಂದ ಈವರೆಗೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com