ಉತ್ತರ ಪ್ರದೇಶ: ಕುಂಭಮೇಳ ಆರಂಭಕ್ಕೂ ಮುನ್ನಾ ದಿನವೇ ಕ್ಯಾಂಪ್ ನಲ್ಲಿ ಅಗ್ನಿ ಅವಘಡ

ಬಹು ನಿರೀಕ್ಷಿತ ಕುಂಭಮೇಳ ಆರಂಭಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗಲೇ ಉತ್ತರ ಪ್ರದೇಶದ ಪ್ರಯಾಗ್ ರಾಜನ್ ಕ್ಯಾಂಪ್ ಒಂದರಲ್ಲಿ ಅಗ್ನಿ ಅವಘಡ ..
ಅಗ್ನಿ ಅವಗಡ ಸಂಭವಿಸಿದ ಸ್ಥಳ
ಅಗ್ನಿ ಅವಗಡ ಸಂಭವಿಸಿದ ಸ್ಥಳ
ಪ್ರಯಾಗರಾಜ್: ಬಹು ನಿರೀಕ್ಷಿತ ಕುಂಭಮೇಳ ಆರಂಭಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗಲೇ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ದಿಗಂಬರ ಅಖಾರ ಕ್ಯಾಂಪ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ, 
ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಬೆಂಕಿಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ, ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಅಗ್ನಿ ಅವಘಡ ಸಂಭವಿಸಿದ್ದು ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಸದ್ಯ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಯಾವುದೇ ಅಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ, ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com