ಭೀಕರ ದೃಶ್ಯ: ಸಿಂಹಗಳ ಬೋನಿಗೆ ನುಗ್ಗಿದ ವ್ಯಕ್ತಿ, ಆತನ ದೇಹವನ್ನು ಸೀಳಿದ ಸಿಂಹಗಳು!

ಭಂಡ ಧೈರ್ಯ ಮಾಡಿದ ವ್ಯಕ್ತಿಯೊರ್ವ 20 ಅಡಿ ಎತ್ತರ ಗೋಡೆಯನ್ನು ಹತ್ತಿ ಸಿಂಹಗಳಿದ್ದ ಬೋನಿಗೆ ನುಗ್ಗಿದ್ದ ಪರಿಣಾಮ ಸಿಂಹಗಳ ದಾಳಿಗೆ ತುತ್ತಾದ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚಂಢಿಗಡ್: ಭಂಡ ಧೈರ್ಯ ಮಾಡಿದ ವ್ಯಕ್ತಿಯೊರ್ವ 20 ಅಡಿ ಎತ್ತರ ಗೋಡೆಯನ್ನು ಹತ್ತಿ ಸಿಂಹಗಳಿದ್ದ ಬೋನಿಗೆ ನುಗ್ಗಿದ್ದ ಪರಿಣಾಮ ಸಿಂಹಗಳ ದಾಳಿಗೆ ತುತ್ತಾದ ವ್ಯಕ್ತಿ ಸಾವನ್ನಪ್ಪಿದ್ದಾನೆ. 
ಪಂಜಾಬ್ ರಾಜ್ಯದ ಛಾಟ್ಬಿರ್ ಮೃಗಾಲಯದಲ್ಲಿ ಈ ಭೀಕರ ಘಟನೆ ನಡೆದಿದೆ. ಭಾನುವಾರ ವ್ಯಕ್ತಿಯೋರ್ವ ನಿಷೇಧಿತ ಪ್ರದೇಶ ಎಂಬ ಸೂಚನ ಫಲಕವಿದ್ದರೂ ಭಂಡ ಧೈರ್ಯ ಮಾಡಿ ನಾಲ್ಕು ಸಿಂಹಗಳಿದ್ದ ಬೋನಿನೊಳಗೆ ನುಗ್ಗಿದ್ದಾನೆ ಕೂಡಲೇ ಸಿಂಹಗಳು ಆತನ ಮೇಲೆ ದಾಳಿ ಮಾಡಿವೆ.
ನಂತರ ವ್ಯಕ್ತಿಯ ಚೀರಾಟ ಕಂಡ ಭದ್ರತಾ ಸಿಬ್ಬಂದಿಗಳು ಓಡಿ ಬಂದು ಆತನ ರಕ್ಷಣೆಗೆ ಮುಂದಾಗಿದ್ದಾರೆ. ಶತಾಯ ಪ್ರಯತ್ನ ಮಾಡಿ ಸಿಂಹಗಳಿಂದ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ರಾಜ್ಯ ಅರಣ್ಯ ಇಲಾಖೆ ಅಧಿಕಾರಿ ರೋಶನ್ ಸುಂಕರಿಯಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com