ಹೌದು.. ಪಾಕಿಸ್ತಾನದಿಂದ ಭಾರತದತ್ತ ಹರಿದುಬರುವ ಕಿಶನ್ ಗಂಗಾ ನದಿಯಲ್ಲಿ ತೇಲಿ ಬಂದ ಏಳು ವರ್ಷದ ಬಾಲಕನ ಶವವನ್ನು ನೋಡಿದ ಭಾರತೀಯ ಸೇನೆಯ ಸೈನಿಕರು ಅದನ್ನು ಸುರಕ್ಷಿತವಾಗಿ ನದಿಯಿಂದ ಮೇಲೆತ್ತೆ ಬಳಿಕ ಅತ್ಯಂತ ಗೌರವಪೂರ್ವಕವಾಗಿ ಪಾಕಿಸ್ತಾನಕ್ಕೆ ಮರಳಿಸಿದ್ದಾರೆ. ಅತ್ಯಂತ ರೋಚಕ ವಿಚಾರವೆಂದರೆ ಬಾಲಕನ ಶವ ನದಿಯ ಅತ್ಯಂತ ಅಪಾಯಕಾರಿ ಜಾಗದಲ್ಲಿ ಸಿಲುಕಿತ್ತು. ಭಾರತದ ಸೇನಾಧಿಕಾರಿಗಳ ತಂಡ ನೆಲಬಾಂಬ್ ಗಳಿದ್ದ ಅಪಾಯಕಾರಿ ಪ್ರದೇಶದಿಂದ ಬಾಲಕನ ಶವವನ್ನು ಸುರಕ್ಷಿತವಾಗಿ ಗಡಿ ನಿಯಂತ್ರಣಾ ರೇಖೆಗೆ ತಂದು, ಪಾಕಿಸ್ತಾನದ ವಶಕ್ಕೆ ಒಪ್ಪಿಸಿದ್ದಾರೆ.