ವೈದ್ಯರ ಮುಷ್ಕರ: ಮಮತಾ ಸಂಪರ್ಕಕ್ಕೆ ಯತ್ನಿಸಿದೆ, ಆದರೆ ಪ್ರತಿಕ್ರಿಯೆ ಇಲ್ಲ- ರಾಜ್ಯಪಾಲ

ಪಶ್ಚಿಮ ಬಂಗಾಳದಲ್ಲಿ ಸಿಎಂ ವಿರುದ್ಧ ಕಿರಿಯ ವೈದ್ಯರ ವೇದಿಕೆ ಸಿಡಿದೆದ್ದಿರುವ ವಿಷಯದ ಬಗ್ಗೆ ಅಲ್ಲಿನ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಪ್ರತಿಕ್ರಿಯೆ ನೀಡಿದ್ದಾರೆ.
ವೈದ್ಯರ ಮುಷ್ಕರ: ಮಮತಾ ಸಂಪರ್ಕಕ್ಕೆ ಯತ್ನಿಸಿದೆ, ಆದರೆ ಪ್ರತಿಕ್ರಿಯೆ ಇಲ್ಲ- ರಾಜ್ಯಪಾಲ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸಿಎಂ ವಿರುದ್ಧ ಕಿರಿಯ ವೈದ್ಯರ ವೇದಿಕೆ ಸಿಡಿದೆದ್ದಿರುವ ವಿಷಯದ ಬಗ್ಗೆ ಅಲ್ಲಿನ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಪ್ರತಿಕ್ರಿಯೆ ನೀಡಿದ್ದಾರೆ. 
ಸಿಎಂ ವಿರುದ್ಧ ಪ್ರತಿಭಟನೆ ಭುಗಿಲೇಳುವುದಕ್ಕೆ ಕಾರಣವಾಗಿದ್ದ ಹಲ್ಲೆ ಪ್ರಕರಾಣದಲ್ಲಿ ಗಾಯಗೊಂಡಿದ್ದ ವೈದ್ಯ ಪರಿಬಹ ಮುಖ್ಯೋಪಾಧ್ಯಾಯ ಅವರ ಆರೋಗ್ಯವನ್ನು ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ವಿಚಾರಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ವೈದ್ಯರು ಪ್ರತಿಭಟನೆ ನಡೆಸುತ್ತಿರುವುದರ ಬಗ್ಗೆ ಮಾತನಾಡಲು ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸಂಪರ್ಕಿಸಲು ಯತ್ನಿಸಿದೆ, ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ. 
ಮುಖ್ಯಮಂತ್ರಿಗಳಿಗೆ ನಾನು ಕರೆ ಮಾಡಿದ್ದೆ, ಆದರೆ ಪ್ರತಿಕ್ರಿಯೆ ಬಂದಿಲ್ಲ. ಅವರೇ ಕರೆ ಮಾಡಿದರೆ ನಾನು ಘಟನೆ ಸಂಬಂಧ ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com