ಒಂದು ದೇಶ, ಒಂದು ಚುನಾವಣೆ ಕುರಿತು ಪ್ರಧಾನಿ ಜೊತೆ ಸರ್ವಪಕ್ಷ ಸಭೆಗೆ ಮಮತಾ, ಉದ್ಧವ್ ಠಾಕ್ರೆ ಗೈರು

ಒಂದು ದೇಶ, ಒಂದು ಚುನಾವಣೆ ಕುರಿತು ಪ್ರಧಾನಿ ಜೊತೆ ಸರ್ವಪಕ್ಷ ಸಭೆಗೆ ಗೈರಾಗಲು ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗೈರಾಗುವ ಸಾಧ್ಯತೆ ಇದೆ.
ಒಂದು ದೇಶ, ಒಂದು ಚುನಾವಣೆ ಕುರಿತು ಪ್ರಧಾನಿ ಜೊತೆ ಸರ್ವಪಕ್ಷ ಸಭೆಗೆ ಮಮತಾ, ಉದ್ಧವ್ ಠಾಕ್ರೆ ಗೈರು
ಒಂದು ದೇಶ, ಒಂದು ಚುನಾವಣೆ ಕುರಿತು ಪ್ರಧಾನಿ ಜೊತೆ ಸರ್ವಪಕ್ಷ ಸಭೆಗೆ ಮಮತಾ, ಉದ್ಧವ್ ಠಾಕ್ರೆ ಗೈರು
Updated on
ನವದೆಹಲಿ: ಒಂದು ದೇಶ, ಒಂದು ಚುನಾವಣೆ ಕುರಿತು ಪ್ರಧಾನಿ ಜೊತೆ ಸರ್ವಪಕ್ಷ ಸಭೆಗೆ ಗೈರಾಗಲು ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗೈರಾಗುವ ಸಾಧ್ಯತೆ ಇದೆ. 
ಈ ಕುರಿತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಪತ್ರ ಬರೆದಿರುವ ತೃಣ ಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಒಂದು ದೇಶ ಒಂದು ಚುನಾವಣೆ ವಿಷಯದ ಕುರಿತು ಸಭೆ ಆಯೋಜಿಸುವ ಬಗ್ಗೆ ನಮಗೆ ಮಾಹಿತಿ ಬಂದ ವೇಳೆಗೆ ಸಮಯ ಕಡಿಮೆ ಇತ್ತು, ಈ ಬಗ್ಗೆ ಸಲಹೆಗಳನ್ನು ಪಡೆಯುವುದಕ್ಕೆ ಕೇಂದ್ರ ಸರ್ಕಾರ ಶ್ವೇತ ಪತ್ರ ಹೊರಡಿಸಲಿ ಎಂದು ಹೇಳಿದ್ದಾರೆ. 
ಇನ್ನು ಪೂರ್ನನಿಯೋಜಿತ ಕಾರ್ಯಕ್ರಮ ಇರುವುದರಿಂದ ಶಿವಸೇನೆಯ ಮುಖ್ಯಸ್ಥರೂ ಸಹ ಸಭೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಜೂ.19 ರಂದು ಒಂದು ದೇಶ, ಒಂದು ಚುನಾವಣೆ ಕುರಿತು ಸರ್ವಪಕ್ಷ ಸಭೆಯನ್ನು ಪ್ರಧಾನಿ ಮೋದಿ ಕರೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com