ನವದೆಹಲಿ: ಐಎಂಎ ಸಂಸ್ಥಾಪಕ, ಹೂಡಿಕೆದಾರರಿಗೆ ವಂಚನೆ ಮಾಡಿ ಪರಾರಿಯಾಗಿರುವ ಮನ್ಸೂರ್ ಖಾನ್ ವಿಡಿಯೋ ಮೂಲಕ ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದ್ದಾನೆ.
ದೇಶ ತೊರೆದು 15 ದಿನಗಳಾದ ನಂತರ ವಿಡಿಯೋ ಮೂಲಕ ಹೂಡಿಕೆದಾರರು ಹಾಗೂ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸಂದೇಶ ಕಳಿಸಿರುವ ಖಾನ್, ತಾನು ದೇಶ ಬಿಡುವುದಕ್ಕೆ ಹಾಗೂ ಈ ಪರಿಸ್ಥಿತಿ ಎದುರಿಸುವುದಕ್ಕೆ ಕಾರಣರಾದವರ ಹೆಸರುಗಳನ್ನು ಬಹಿರಂಗಪಡಿಸಿದ್ದಾನೆ.
ಜೆಡಿಎಸ್ ನ ಶರವಣ ಸೇರಿದಂತೆ ಕೆಲವು ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ಯಮದಲ್ಲಿರುವವರ ಹೆಸರುಗಳನ್ನು ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾನೆ. ವಿಡಿಯೋ ಬಹಿರಂಗವಾಗುತ್ತಿದ್ದಂತೆಯೇ ಎಸ್ ಐಟಿ ಅಲರ್ಟ್ ಆಗಿದೆ.