ಭುವನೇಶ್ವರ: ರೈಲು ನಿಲ್ದಾಣದಲ್ಲಿ ಅವಘಡ, ಪ್ರಯಾಣಿಕನನ್ನು ರಕ್ಷಿಸಿದ ಆರ್ ಪಿಎಫ್ ಕಾನ್ಸ್ ಟೇಬಲ್, ವಿಡಿಯೋ

ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಅವಘಡವೊಂದು ಸಂಭವಿಸಿದೆ.ಫ್ಲಾಟ್ ಫಾರಂನಲ್ಲಿ ಚಲಿಸುತ್ತಿದ್ದ ರೈಲಿನ ಮೇಲೆ ಬಿದ್ದ ಪ್ರಯಾಣಿಕರೊಬ್ಬರನ್ನು ರೈಲ್ವೆ ಸುರಕ್ಷತಾ ಪಡೆ -ಆರ್ ಪಿಎಫ್ ಕಾನ್ಸ್ ಟೇಬಲ್ ಎನ್ ಬಿ ರಾವ್ ಕಾಪಾಡಿದ್ದಾರೆ.
ಭುವನೇಶ್ವರ ರೈಲು ನಿಲ್ದಾಣ
ಭುವನೇಶ್ವರ ರೈಲು ನಿಲ್ದಾಣ
Updated on

ಭುವನೇಶ್ವರ: ಒಡಿಶಾದ ರಾಜಧಾನಿ ಭುವನೇಶ್ವರ ರೈಲು ನಿಲ್ದಾಣದಲ್ಲಿ  ಅವಘಡವೊಂದು ಸಂಭವಿಸಿದೆ.

ಫ್ಲಾಟ್ ಫಾರಂನಲ್ಲಿ ಚಲಿಸುತ್ತಿದ್ದ ರೈಲಿನ ಮೇಲೆ ಬಿದ್ದ ಪ್ರಯಾಣಿಕರೊಬ್ಬರನ್ನು ರೈಲ್ವೆ ಸುರಕ್ಷತಾ ಪಡೆ -ಆರ್ ಪಿಎಫ್ ಕಾನ್ಸ್ ಟೇಬಲ್ ಎನ್ ಬಿ ರಾವ್ ಕಾಪಾಡಿದ್ದಾರೆ.

ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಿಲ್ಲದೆ ಆ ಪ್ರಯಾಣಿಕ ಬದುಕುಳಿದಿದ್ದಾರೆ. ತದ ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರ್ ಪಿಎಫ್ ಕಾನ್ಸ್ ಟೇಬಲ್  ಎನ್ ಬಿ ರಾವ್ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.


ಫ್ಲಾಟ್ ಫಾರಂಗಳಲ್ಲಿ  ರೈಲ್ವೆ ಸುರಕ್ಷತಾ ಪಡೆ ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರೂ ಕೂಡಾ ಇಂತಹ ಘಟನೆಗಳು ಆಗ್ಗಿಂದಾಗ್ಗೆ ಮರುಕಳಿಸುತ್ತಲೇ ಇರುತ್ತವೆ. ಇಂತಹ ಘಟನೆಗಳು ಮರುಕಳಿಸದಂತೆ ಪ್ರಯಾಣಿಕರಿಗೆ ರೈಲು ಇಲಾಖೆ ಅಗತ್ಯ ಸೂಚನೆ, ಮಾಹಿತಿ ನೀಡಬೇಕಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com