ನವದೆಹಲಿ: ಸಿಖ್ಖರ ಪವಿತ್ರ ಕ್ಷೇತ್ರ ಕರ್ತಾರ್ಪುರ್ ಗೆ ಸಂಪರ್ಕಿಸುವ ಕರ್ತಾರ್ಪುರ್ ಕಾರಿಡಾರ್ ಕುರಿತಂತೆ ಭಾರತ-ಪಾಕಿಸ್ತಾನದ ಮಡುವೆ ಮೊದಲ ಸಭೆ ಮಾರ್ಚ್ 14ರಂದು ನಡೆಯಲಿದೆ. ಪಂಜಾಬ್ ನ ಅಟಾರಿ-ವಾಘಾ ಗಡಿಯಲ್ಲಿ ಈ ಸಭೆ ಆಯೋಜನೆಯಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಈ ಸಭೆ ಬಳಿಕ ಅದೇ ದಿನದಂದು ಕಾರಿಡಾರ್ ನ ಕುರಿತು ತಾಂತ್ರಿಕ ಮಟ್ಟದ ಚರ್ಚೆ ನಡೆಯಬೇಕೆಂದು ಭಾರತ ಸೂಚಿಸಿದೆ" ಎಂದು ಹೇಳಿಕೆ ತಿಳಿಸಿದೆ.