ಕರ್ತಾರ್‌ಪುರ್‌ ಕಾರಿಡಾರ್: ಮಾರ್ಚ್ 14ರಂದು ಭಾರತ, ಪಾಕ್ ನಡುವೆ ಮೊದಲ ಸಭೆ

ಸಿಖ್ಖರ ಪವಿತ್ರ ಕ್ಷೇತ್ರ ಕರ್ತಾರ್‌ಪುರ್‌ ಗೆ ಸಂಪರ್ಕಿಸುವ ಕರ್ತಾರ್‌ಪುರ್‌ ಕಾರಿಡಾರ್ ಕುರಿತಂತೆ ಭಾರತ-ಪಾಕಿಸ್ತಾನದ ಮಡುವೆ ಮೊದಲ ಸಭೆ ಮಾರ್ಚ್ 14ರಂದು ನಡೆಯಲಿದೆ.
ಕರ್ತಾರ್‌ಪುರ್‌ ಕಾರಿಡಾರ್:  ಮಾರ್ಚ್ 14ರಂದು ಭಾರತ, ಪಾಕ್ ನಡುವೆ ಮೊದಲ ಸಭೆ
ಕರ್ತಾರ್‌ಪುರ್‌ ಕಾರಿಡಾರ್: ಮಾರ್ಚ್ 14ರಂದು ಭಾರತ, ಪಾಕ್ ನಡುವೆ ಮೊದಲ ಸಭೆ
Updated on
ನವದೆಹಲಿ: ಸಿಖ್ಖರ ಪವಿತ್ರ ಕ್ಷೇತ್ರ ಕರ್ತಾರ್‌ಪುರ್‌ ಗೆ ಸಂಪರ್ಕಿಸುವ ಕರ್ತಾರ್‌ಪುರ್‌ ಕಾರಿಡಾರ್  ಕುರಿತಂತೆ ಭಾರತ-ಪಾಕಿಸ್ತಾನದ ಮಡುವೆ ಮೊದಲ ಸಭೆ ಮಾರ್ಚ್ 14ರಂದು ನಡೆಯಲಿದೆ. ಪಂಜಾಬ್ ನ ಅಟಾರಿ-ವಾಘಾ ಗಡಿಯಲ್ಲಿ ಈ ಸಭೆ ಆಯೋಜನೆಯಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಈ ಸಭೆ ಬಳಿಕ ಅದೇ ದಿನದಂದು ಕಾರಿಡಾರ್ ನ  ಕುರಿತು ತಾಂತ್ರಿಕ ಮಟ್ಟದ ಚರ್ಚೆ ನಡೆಯಬೇಕೆಂದು ಭಾರತ ಸೂಚಿಸಿದೆ" ಎಂದು ಹೇಳಿಕೆ ತಿಳಿಸಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿದಂತೆ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಭಾರತ್-ಪಾಕ್ ನಡುವಿನ ಸಂಬಂಧ ಸಂಘರ್ಷ ಕೊನೆಗೊಳಿಸಲು ಪಾಕಿಸ್ತಾನ ಕ್ರಮಗಳನ್ನು ಕೈಗೊಂಡಿದೆ. ಮಾರ್ಚ್ 6 ರಂದು ದೆಹಲಿಗೆ ಭಾರತದ ಹೈಕಮಿಷನರ್ ಸೊಹೈಲ್ ಮಹಮೂದ್ ಹಿಂತಿರುಗುವಂತೆಯೂ ಸೂಚಿಸಿದೆ. 
ಮಾರ್ಚ್ 14ರ ಸಭೆಯ ಬಳಿಕ ಮಾರ್ಚ್ 28ರಂದು ಭಾರತೀಯ ನಿಯೋಗವು ಇಸ್ಲಾಮಾಬಾದ್ ಗೆ ಭೇಟಿ ನೀಡಲಿದೆ.
ಫೆಬ್ರುವರಿ 14 ರಂದು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಇಹಮ್ಮದ್ (ಜೆಎಂ) ನಡೆಸಿದ ಪುಲ್ವಾಮಾ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಸಮಾಲೋಚನೆಗಳಿಗಾಗಿ ಮಹಮೂದ್ ಅವರನ್ನು ಪಾಕಿಸ್ತಾನ ಹಿಂದಕ್ಕೆ ಕರೆಸಿಕೊಂಡಿತ್ತು. ಇದೀಗ ಮಂಗಳವಾರ ರಾತ್ರಿ ಪಾಕಿಸ್ತಾನವು ಜಮಾತ್-ಉಲ್-ದವಾ(ಜೆಯುಡಿ)ಮತ್ತು ಅದರ ಸಹ-ಸಂಸ್ಥೆಫಲಾಹ್ ಇ ಇನ್ಸ್ಯಾನಿಟ್ ಫೌಂಡೇಶನ್ (ಎಫ್ಐಎಫ್) ಗಳನ್ನು ಹಾಗೂ ಲಷ್ಕರ್-ಇ-ತೊಯ್ಬಾ ಭಯೋತ್ಪಾದನಾ ಸಂಘಟನೆ ಸೇರಿ ಹಲವು ಸಂಘಟನೆಗಳನ್ನು ಭಯೋತ್ಪಾದನೆ ವಿದ್ರೋಧಿ ಕಾಯ್ದೆ 1997ರ ಅಡಿಯಲ್ಲಿ ನಿಷೇಧಿಸಿದೆ. ಆದರೆ ಜೆಇಎಂ ವುಇರುದ್ಧ ಇದುವರೆಗೆ ಯಾವ ನಿಷೇಧವನ್ನೂ ಹೇರಿಲ್ಲ. ಈ ಹಿನ್ನೆಲೆಯಲ್ಲಿ ಮೊನ್ನಿನ ಪುಲ್ವಾಮಾ ದಾಳಿ ಬಳಿಕ ಭಾರತ ಸೇರಿ ಜ್ಗತಿಕ ಶಕ್ತಿಶಾಲಿ ರಾಷ್ಟ್ರಗಳು  ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸಭೇಕೆಂದು ಪಾಕಿಸ್ತಾನಕ್ಕೆ ತೀವ್ರ ಒತ್ತಡ ಹಾಕಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com