ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ನಾಯಕರ ಆರೋಪ-ಪ್ರತ್ಯಾರೋಪ, ವಾಗ್ದಾಳಿ, ಕಾಲೆಳೆಯುವಿಕೆ, ವ್ಯಂಗ್ಯದಂತಹ ಪ್ರಹಸನಗಳು ಮುಗಿಲು ಮುಟ್ಟಿದ್ದು, ಇದೀಗ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ, ಮೋದಿ ಬೆಂಬಲಿಗರ ಕಾಲೆಳೆದಿದ್ದಾರೆ. ಪುಲ್ವಾಮ ಉಗ್ರ ದಾಳಿ, ಅಭಿನಂದನ್ ವರ್ಧಮಾನ್ ಪ್ರಕರಣ, ವಾಯುದಾಳಿ ಕುರಿತು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ರಮ್ಯಾ ಇದೀಗ ನೇರವಾಗಿ ಮೋದಿ ಬೆಂಬಲಿಗರ ಕಾಲೆಳೆದಿದ್ದಾರೆ.