ಮಿರ್ಜಾಪುರ: ಜನರು ಮೂರ್ಖರೆಂದು ಪ್ರಧಾನಿಗಳು ತಿಳಿಯಬೇಕಾಗಿಲ್ಲ, ಅವರು ಹಾಗೆ ಆಲೋಚಿಸುವುದನ್ನು ಮೊದಲು ಬಿಡಲಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ವಂಶಾಡಳಿತದಿಂದ ಸಾರ್ವಜನಿಕ ಸಂಸ್ಥೆಗಳಿಗೆ ತೀವ್ರ ಕುಂದುಂಟಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಗೆ ಪೂರ್ವ ಉತ್ತರಪ್ರದೇಶದ ಜವಾಬ್ದಾರಿ ಹೊತ್ತಿರುವ ಪ್ರಿಯಾಂಕಾ ತಿರುಗೇಟು ನೀಡಿದ್ದಾರೆ.