ಅಪಹೃತ ಹಿಂದೂ ಬಾಲಕಿಯರಿಬ್ಬರ ಬಿಡುಗಡೆಗೆ ಸಚಿವೆ ಸುಷ್ಮಾ ಸ್ವರಾಜ್ ಆಗ್ರಹ

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ಅಪಹೃತವಾಗಿರುವ ಹಿಂದೂ ಬಾಲಕಿಯರಿಬ್ಬರು ಮರಳಿ ಪೋಷಕರನ್ನು ಸೇರಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ...
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ನವದೆಹಲಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ಅಪಹೃತವಾಗಿರುವ ಹಿಂದೂ ಬಾಲಕಿಯರಿಬ್ಬರು ಮರಳಿ ಪೋಷಕರನ್ನು ಸೇರಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ಚರಾಜ್ ಒತ್ತಾಯಿಸಿದ್ದಾರೆ. 
ಅಪಹರಣಕ್ಕೊಳಗಾಗಿರುವ ಬಾಲಕಿಯರ ವಯಸ್ಸು 15 ಮತ್ತು 13. ಇದರಲ್ಲಿ ಯಾವುದೇ ವಿವಾದವಿಲ್ಲ, ಪಾಕಿಸ್ತಾನದಲ್ಲಿ ಹಿಂದೂ ಬಾಲಕಿಯರನ್ನು ಬಲವಂತದ ಮತಾಂತರಕ್ಕೆ ಒಳಪಡಿಸಲಾಗಿದೆ. ಇಬ್ಬರನ್ನೂ ಅವರ ಕುಟುಂಬಕ್ಕೆ ಮರಳಿಸುವ ಮೂಲಕ ನ್ಯಾಯ ಸಿಗುವಂತಾಗಬೇಕು ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ. 
“ಅಪ್ರಾಪ್ತ ಬಾಲಕಿಯರು ಮತಾಂತರದ ಕುರಿತು ಸ್ವಯಂ ನಿರ್ಧಾರ ಕೈಗೊಳ್ಳುವ ಮನಸ್ಥಿತಿ ತಲುಪಿರುವುದಿಲ್ಲ ಎಂಬುದನ್ನು ನವ ಪಾಕಿಸ್ತಾನದ ಪ್ರಧಾನಿ ನಂಬುವುದಿಲ್ಲ ಎನಿಸುತ್ತಿದೆ” ಪಾಕ್ ಪ್ರಧಾನಿಯವರನ್ನು ಸುಷ್ಮಾ ತರಾಟೆಗೆ ತೆಗೆದುಕೊಂಡಿದ್ದಾರೆ
ಹೋಳಿ ಹಬ್ಬದ ಹಿಂದಿನ ದಿನ ಸಿಂದ್ ಪ್ರಾಂತದ ಬಾಲಕಿಯರನ್ನು ಅಪಹರಿಸಿ, ಮತಾಂತರಗೊಳಿಸಿದ ನಂತರ ಮುಸ್ಲಿಂ ಯುವಕರೊಂದಿಗೆ ಬಲವಂತವಾಗಿ ಮದುವೆ ಮಾಡಲಾಗಿದೆ ಎಂಬ ಸುದ್ದಿ ಆಕ್ರೋಶಕ್ಕೆ ಕಾರಣವಾಗಿದೆ. ಬಾಲಕಿಯರನ್ನು ಮರಳಿಸುವಂತೆ ಆಗ್ರಹಿಸಿ ಪೋಷಕರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com