ವಿವಾದಿತ ಇಸ್ಲಾಮಿಕ್ ಪ್ರಚಾರಕ ಝಾಕಿರ್ ನಾಯ್ಕ್ ಗೆ ಬೆಂಬಲ ನೀಡುವ ದಿಗ್ವಿಜಯ್ ಸಿಂಗ್ ವಿರುದ್ಧವೂ ಮೋದಿ ಕಿಡಿಕಾರಿದ್ದು, ಶ್ರೀಲಂಕಾದಲ್ಲಿ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಅಲ್ಲಿನ ಸರ್ಕಾರ ಝಾಕಿರ್ ನಾಯ್ಕ್ ಟಿವಿ ಚಾನಲ್ ನ್ನು ನಿಷೇಧಿಸಿತ್ತು, ಅದೇ ಝಾಕಿರ್ ನಾಯ್ಕ್ ನ್ನು ದಿಗ್ವಿಜಯ್ ಸಿಂಗ್ ಶಾಂತಿಯ ದೂತ ಎಂದು ಬಣ್ಣಿಸಿದ್ದರು. ದಿಗ್ವಿಜಯ್ ಸಿಂಗ್ ಭೋಪಾಲ್ ನ ಕಾಂಗ್ರೆಸ್ ಅಭ್ಯರ್ಥಿ ಎಂಬುದನ್ನು ಮರೆಯಬೇಡಿ ಎಂದು ಮೋದಿ ಜನತೆಗೆ ನೆನಪಿಸಿದ್ದಾರೆ.