ಗಂಗಾ ರಕ್ಷಣೆಗೆ ಆಗ್ರಹಿಸಿದ್ದ ಸ್ವಾಮಿ ಆತ್ಮಬೋಧಾನಂದರ 194 ದಿನಗಳ ಉಪವಾಸ ಅಂತ್ಯ

ಗಂಗಾನದಿ ಶುದ್ದೀಕರಣಕ್ಕೆ ಆಗ್ರಹಿಸಿ ಗಂಗೆಯ ರಕ್ಷಣೆಗಾಗಿ 194 ದಿನಗಳಿಂದ ಉಪವಾಸ ನಿರತವಾಗಿದ್ದ ಸ್ವಾಮಿ ಆತ್ಮಬೋಧಾನಂದ ತಮ್ಮ ಉಪವಾಸ ಅಂತ್ಯಗೊಳಿಸಿದ್ದಾರೆ.
ಸ್ವಾಮಿ ಆತ್ಮಬೋಧಾನಂದ
ಸ್ವಾಮಿ ಆತ್ಮಬೋಧಾನಂದ
Updated on
ಹರಿದ್ವಾರ: ಗಂಗಾನದಿ ಶುದ್ದೀಕರಣಕ್ಕೆ ಆಗ್ರಹಿಸಿ ಗಂಗೆಯ ರಕ್ಷಣೆಗಾಗಿ 194 ದಿನಗಳಿಂದ ಉಪವಾಸ ನಿರತವಾಗಿದ್ದ ಸ್ವಾಮಿ ಆತ್ಮಬೋಧಾನಂದ  ತಮ್ಮ ಉಪವಾಸ ಅಂತ್ಯಗೊಳಿಸಿದ್ದಾರೆ.
ನ್ಯಾಷನಲ್ ಮಿಷನ್ ಆಫ್ ಕ್ಲೀನ್ ಗಂಗಾ (ಎನ್ಎಂಸಿಜಿ) ನೀಡಿದ ಲಿಖಿತ ಭರವಸೆಯ ಬಳಿಕ ಅವರು ತಮ್ಮ ಉಪವಾಸಕ್ಕೆ ಮಂಗಳ ಹಾಡಿದ್ದಾರೆ.
"ಎನ್ಎಂಸಿಜಿ ನಿರ್ದೇಶಕ ಜನರಲ್ ರಾಜೀವ್ ರಂಜನ್ ಎಪ್ರಿಲ್ 25 ರಂದು ನನ್ನನ್ನು ಭೇಟಿ ಮಾಡಿದ್ದರು. ಆ ವೇಳೆ ನಾವು ಚರ್ಚೆ ನಡೆಸಿದ್ದು ಅಣೆಕಟ್ಟುಗಳ ನಿರ್ಮಾಣ ಸಂಬಂಧ ಕ್ರಮ ತೆಗೆದುಕೊಳ್ಲಲಾಗುತ್ತದೆ,  ಗಣಿಗಾರಿಕೆಯ ವಿರುದ್ಧ ಸಹ ಕ್ರಮ ಜರುಗಿಸಲಾಗುವುದು,  ಎಂದು ಲಿಖಿತ ಭರವಸೆ ನೀಡಿದ್ದಾರೆ. ಇದು ಸರ್ಕಾರ ಹಾಗೂ ಎನ್ಎಂಸಿಜಿ ಯ ಸಕಾರಾತ್ಮಕ ಉಪಕ್ರಮವಾಗಿದ್ದು, ಇದೀಗ ನಾನು ನನ್ನ ಉಪವಾಸವನ್ನು ಕೈಬಿಟ್ಟಿದ್ದೇನೆ" ಆತ್ಮಬೋಧಾನಂದ  ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com