ಅಯೋಧ್ಯೆ ವಿವಾದ: ಮೇ 10ಕ್ಕೆ ಸುಪ್ರೀಂನಲ್ಲಿ ಸಂಧಾನಕಾರರ ವರದಿ ವಿಚಾರಣೆ

ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ(ಮೇ 10) ವಿಚಾರಣೆ ನಡೆಸಲಿದೆ.
ಅಯೋಧ್ಯೆ ವಿವಾದ: ಮೇ 10ಕ್ಕೆ ಸುಪ್ರೀಂನಲ್ಲಿ ಸಂಧಾನಕಾರರ ವರದಿ ವಿಚಾರಣೆ
ಅಯೋಧ್ಯೆ ವಿವಾದ: ಮೇ 10ಕ್ಕೆ ಸುಪ್ರೀಂನಲ್ಲಿ ಸಂಧಾನಕಾರರ ವರದಿ ವಿಚಾರಣೆ
Updated on
ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ(ಮೇ 10) ವಿಚಾರಣೆ ನಡೆಸಲಿದೆ.
ನ್ಯಾಯಮೂರ್ತಿಗಳಾದ ಎಸ್. ಎ. ಬೊಬ್ಬೆ, ಡಿ.ವೈ. ಚಂದ್ರಚೂಡ, ಅಶೋಕ್ ಭೂಷಣ್ ಮತ್ತು ಎಸ್ ಅಬ್ದುಲ್ ನಝೀರ್ ಸೇರಿದಂತೆ ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಈ ವಿಚಾರಣೆ ನಡೆಸಲಿದೆ.
ಈ ಹಿಂದೆ ಐವರು ಸದಸ್ಯರ ನ್ಯಾಯಪೀಠ ಅಯೋಧ್ಯೆ ಪ್ರಕರಣ ಇತ್ಯರ್ಥಕ್ಕಾಗಿ  ಮೂವರು ಸಂಧಾನಕಾರರ ಸಮಿತಿಯನ್ನು ನೇಮಕ ಮಾಡಿತ್ತು. ಇದೀಗ ಮೇ 10ರಿಂದ  ಈ ಸಂಧಾನಕಾರರು ನೀಡಿರುವ ವರದಿಯ ವಿಚಾರಣೆ ನಡೆಯಲಿದೆ.
ಕಳೆದ ಮಾರ್ಚ್ 8ರಂದು ಸರ್ವೋಚ್ಚ ನ್ಯಾಯಾಲಯವು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಮೂರ್ತಿ ಎಫ್ ಎಂ ಐ ಖಲಿಫುಲ್ಲಾ ನೇತೃತ್ವದ ಮೂವರು ಸದಸ್ಯರ ಸಂಧಾನಕಾರರಿಗೆ ಈ ಸೂಕ್ಷ್ಮ ಪ್ರಕರಣ ಇತ್ಯರ್ಥಕ್ಕೆ ಅವಕಾಶ ಕಲ್ಪಿಸಿದ ಬಳಿಕ ಇದೇ ಮೊದಲ ಬಾರಿಗೆ ಪ್ರಕರಣವು ನ್ಯಾಯಾಲಯದ ಮುಂದೆ ಬರಲಿದೆ.
ನ್ಯಾಯಮೂರ್ತಿ ಖಲಿಫುಲ್ಲಾ ಅವರಲ್ಲದೆ ಶ್ರೀಶ್ರೀ ರವಿಶಂಕರ್ ಗುರೂಜಿ, ಹಿರಿಯ ವಕೀಲರಾದ ಶ್ರೀರಾಮ್ ಪಂಚು ಸಂಧಾನಕಾರರ ಸಮಿತಿಯ ಸದಸ್ಯರಾಗಿದ್ದಾರೆ.ಕೋರ್ಟ್ ಈ ಸಮಿತಿಗೆ ಒಟ್ಟು ನಾಲ್ಕು ವಾರಗಳಲ್ಲಿ ಸಂಧಾನ ಮಾತುಕತೆ ಮುಗಿಸಿ ಎಂಟು ವಾರಗಳಲ್ಲಿ ವರದಿ ನೀಡಬೇಕೆಂದು ಆದೇಶ ನೀಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com