ಬಿಜೆಪಿಗೆ ಮತಹಾಕಿದ್ದಕ್ಕೆ ಕಾಂಗ್ರೆಸ್ ಬೆಂಬಲಿಗನಿಂದ 60 ವರ್ಷದ ವ್ಯಕ್ತಿ ಕೊಲೆ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ 60 ವರ್ಷದ ವ್ಯಕ್ತಿಯನ್ನು ಕಾಂಗ್ರೆಸ್ ಬೆಂಬಲಿಗ ಶೂಟ್ ಮಾಡಿ ಕೊಂದಿರುವ ಘಟನೆ ಮಧ್ಯ ಪ್ರದೇಶದಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಇಂದೋರ್:  ಲೋಕಸಭೆ ಚುನಾವಣೆಯಲ್ಲಿ  ಬಿಜೆಪಿಗೆ ಮತ ಹಾಕಿದ 60 ವರ್ಷದ ವ್ಯಕ್ತಿಯನ್ನು ಕಾಂಗ್ರೆಸ್ ಬೆಂಬಲಿಗ ಶೂಟ್ ಮಾಡಿ ಕೊಂದಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಸಚಿವರೊಬ್ಬರ ಆಪ್ತನಾಗಿರುವ ಅರುಣ್ ಶರ್ಮಾ ಬಿಜೆಪಿಗೆ ಮತಹಾಕಿದ್ದ ಸಲೂನ್ ಮಾಲೀಕ ನೇಮಿಚಂದ ತನ್ವಾರ್ ನನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ನಡೆದ ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನದಲ್ಲಿ ನೇಮಿಚಂದ್ ಬಿಜೆಪಿಗೆ ಮತ ಹಾಕಿದ್ದರು, ಇದರಿಂದ ಕೋಪಗೊಂಡ ಅರುಣ್ ಶರ್ಮಾ ಆತನ ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆ.
ಸಂಜೆ ನೇಮಿಚಂದ್ ಮನೆಗೆ ಬಂದ ಅರುಣ್ ಶರ್ಮಾ, ಕಂಟ್ರಿ ಮೇಡ್ ಪಿಸ್ತೂಲ್ ನಿಂದ ಗುಂಡು ಹಾರಿಸಿ ಕೊಂದಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com