ದಾಳಿ ನಡೆದೇ ಇಲ್ಲ: ಸಾಬೀತಿಗೆ ವಿದೇಶಿ ನಿಯೋಗ ಕರೆದೊಯ್ದ ಪಾಕ್'ಗೆ ತೀವ್ರ ಮುಜುಗರ

ಗಡಿಯಲ್ಲಿ ಉಗ್ರರ ನೆಲೆಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದ್ದನ್ನು ಸುಳ್ಳು ಎಂದು ಸಾಬೀತುಪಡಿಸಲು ಹೋಗಿ ಪಾಕಿಸ್ತಾನ ಸೇನೆ ತೀವ್ರ ಮುಜುಗರಕ್ಕೊಳಗಾದ ಪ್ರಸಂಗ ನಡೆದಿದೆ. 
ದಾಳಿ ನಡೆದೇ ಇಲ್ಲ: ಸಾಬೀತಿಗೆ ವಿದೇಶಿ ನಿಯೋಗ ಕರೆದೊಯ್ದ ಪಾಕ್'ಗೆ ತೀವ್ರ ಮುಜುಗರ
ದಾಳಿ ನಡೆದೇ ಇಲ್ಲ: ಸಾಬೀತಿಗೆ ವಿದೇಶಿ ನಿಯೋಗ ಕರೆದೊಯ್ದ ಪಾಕ್'ಗೆ ತೀವ್ರ ಮುಜುಗರ
Updated on

ವಿದೇಶಿ ನಿಯೋಗ ಭೇಟಿ ನೀಡುತ್ತಿದ್ದಂತೆಯೇ ಪ್ರತಿಭಟನೆಗಿಳಿದ ಸ್ಥಳೀಯರು: ಲಾಠಿ ಚಾರ್ಜ್ ವೇಳೆ 2 ಸಾವು, 80 ಮಂದಿಗೆ ಗಾಯ
 

ನವದೆಹಲಿ: ಗಡಿಯಲ್ಲಿ ಉಗ್ರರ ನೆಲೆಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದ್ದನ್ನು ಸುಳ್ಳು ಎಂದು ಸಾಬೀತುಪಡಿಸಲು ಹೋಗಿ ಪಾಕಿಸ್ತಾನ ಸೇನೆ ತೀವ್ರ ಮುಜುಗರಕ್ಕೊಳಗಾದ ಪ್ರಸಂಗ ನಡೆದಿದೆ. 

ನಿನ್ನೆಯಷ್ಟೇ ಪಾಕಿಸ್ತಾನ ಸೇನೆ ದಾಳಿ ನಡೆದ ಸ್ಥಳಕ್ಕೆ ವಿದೇಶಿ ನಿಯೇಗವನ್ನು ಕರೆದುಕೊಂಡು ಹೋಗಿ, ಭಾರತೀಯ ಸೇನೆ ಹೇಳಿದಂತೆ ಯಾವುದೇ ದಾಳಿಗಳೂ ನಡೆದಿಲ್ಲ ಎಂದು ಸಾಬೀತು ಮಾಡಲು ಮುಂದಾಗಿತ್ತು. 
 
ಇದರಂತೆ ವಿದೇಶಿ ನಿಯೋಗವನ್ನು ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದಂತೆಯೇ ಸ್ಥಳೀಯ ನಿವಾಸಿಗಳು ಪಾಕಿಸ್ತಾನ ಸರ್ಕಾರ ಹಾಗೂ ಪಾಕಿಸ್ತಾನ ಸೇನೆ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದ್ದಾರೆ. 

ಸ್ವಾತಂತ್ರ್ಯ ಆಗ್ರಹಿಸಿ ಮುಜಾಫರಾಬಾದ್ ನಲ್ಲಿರುವ ಸ್ಥಳೀಯರು ಬೀದಿಗಿಳಿದ ಪ್ರತಿಭಟನೆ ನಡೆಸಲು ಆರಂಭಿಸಿದ್ದಾರೆ. ಪ್ರತಿಭಟನೆ ವೇಳೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪಾಕಿಸ್ತಾನ ಸೇನೆ ವಿರುದ್ಧ ಘೋಷಣೆಗಳನನು ಕೂಗಿದ್ದಾರೆ. 

1947 ಅಕ್ಟೋಬರ್ 22 ಪಾಕಿಸ್ತಾನ ಸೇನೆ ಜಮ್ಮು ಮತ್ತು ಕಾಶ್ಮೀರದ ಕೆಲ ಭಾಗಗಳನ್ನು ಆಕ್ರಮಿಸಿದ ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯರು ಸ್ವಾತಂತ್ರ್ಯ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದರು. ಇದೇ ಸಂದರ್ಭದಲ್ಲಿಯೇ ವಿದೇಶಿ ನಿಯೋಗ ಭೇಟಿ ನೀಡಿದ ಹಿನ್ನೆಲೆಯಲ್ಲಿ ಕೆಂಡಾಮಂಡಲಗೊಂಡ ಪ್ರತಿಭಟನಾಕಾರರು ಪ್ರತಿಭಟನೆಯನ್ನು ತೀವ್ರಗೊಳಿಸಿದರು. 
 
ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಈ ವೇಳೆ ಇಬ್ಬರು ಸಾವನ್ನಪ್ಪಿ, 80ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com