ಬಿಲಾಸಪುರ್: ತಮ್ಮ ಸಮಾಜಮುಖಿ ಕೆಲಸಗಳಿಂದ ಗುರುತಿಸಿಕೊಂಡಿದ್ದ ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ದಾಮೋದರ್ ಗಣೇಶ್ ಬಾಪಟ್ ವಿಧಿವಶರಾಗಿದ್ದಾರೆ.
84 ವರ್ಷದ ಬಾಪಟ್ ಛತ್ತೀಸ್ ಗಡದ ಬುಡುಕಟ್ಟು ಜನಾಂಗಕ್ಕಾಗಿ ತಮ್ಮ ಸೇವೆ ಸಲ್ಲಿಸಿದ್ದರು. ಚಂಪಾ ಜಿಲ್ಲೆಯ ಕುಷ್ಟ ನಿರ್ವಾಹಕ್ ಸಂಘ್ ಮೂಲಕ ಕುಷ್ಟರೋಗಿಗಗಳ ಚಿಕಿತ್ಸೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ.
ಅವರ ಸಾಧನೆಯನ್ನು ಗಮನದಲ್ಲಿರಿಸಿಕೊಂಡು 2018ರನೇ ಸಾಲಿನಲ್ಲಿ 4ನೇ ಶ್ರೇಷ್ಟ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಗೌರವ ನೀಡಲಾಗಿತ್ತು.
Advertisement