ಭಗವಾನ್ ಕೃಷ್ಣನ ರೀತಿಯಲ್ಲಿ ಕೊಳಲು ನುಡಿಸಿದರೆ ಹಸುಗಳು ಹೆಚ್ಚು ಹಾಲು ಕೊಡುತ್ತವೆ ಎಂಬ ತಮ್ಮ ಇತ್ತೀಚಿನ ಹೇಳಿಕೆಯನ್ನು ಬಿಜೆಪಿ ಶಾಸಕ ದಿಲೀಪ್ ಕುಮಾರ್ ಪೌಲ್ ಸಮರ್ಥಿಸಿಕೊಂಡಿದ್ದಾರೆ.
ತಮ್ಮ ಹೇಳಿಕೆ ಅತಿ ಪ್ರತಿಭಾವಂತ ಸಂಶೋಧನಾ ತಂಡದಿಂದ ಸಾಬೀತಾಗಿದೆ ಎಂದು ಅಸ್ಸಾಂ ನ ಬಿಜೆಪಿ ನಾಯಕ ದಿಲೀಪ್ ಕುಮಾರ್ ಪೌಲ್ ಹೇಳಿದ್ದಾರೆ.
ಕೃಷ್ಣನ ರೀತಿ ಕೊಳಲು ನುಡಿಸಿದರೆ ಹಸುಗಳಿಂದ ಹೆಚ್ಚು ಹಾಲು ಸಿಗುತ್ತದೆ ಎಂಬ ಹೇಳಿಕೆ ನನ್ನದಲ್ಲ, ಗುಜರಾತ್ ನ ಪ್ರತಿಭಾವಂತ ಸಂಶೋಧನಾ ತಂಡದಿಂದ ಸಾಬೀತಾಗಿರುವ ಸಂಗತಿ, ಭಗವಾನ್ ಕೃಷ್ಣ ಕಾಲಹರಣಕ್ಕಾಗಿ ಕೊಳಲನ್ನು ನುಡಿಸಲಿಲ್ಲ, ಈ ರೀತಿಯ ತಂತ್ರವನ್ನು ಆಧುನಿಕ ಕಾಲದಲ್ಲೂ ಅಳವಡಿಸಿಕೊಳ್ಳಲಿದ್ದೇವೆ ಎಂದು ಸಿಲ್ಚಾರ್ ನ ಬಿಜೆಪಿ ಶಾಸಕ ಹೇಳಿದ್ದಾರೆ.
Advertisement