ಆದರೆ, ಸೇವೆಗಳ ವಿಚಾರದಲ್ಲಿ ಇಬ್ಬರು ನ್ಯಾಯಮೂರ್ತಿಗಳು ತದ್ವಿರುದ್ಧ ತೀರ್ಪು ನೀಡಿದ್ದು, ನ್ಯಾ ಎಕೆ ಸಿಕ್ರಿ ಅವರು ಕೇಂದ್ರ ಸರ್ಕಾರದ ಪರ ತೀರ್ಪು ಕೊಟ್ಟರೆ, ನ್ಯಾ ಅಶೋಕ್ ಭೂಷಣ್ ಅವರು ದೆಹಲಿ ಸರ್ಕಾರಕ್ಕೆ ಅಧಿಕಾರ ಇರಬೇಕೆಂದು ಹೇಳಿದರು. ಈ ಒಂದು ವಿಚಾರದಲ್ಲಿ ದ್ವಿಸದಸ್ಯ ನ್ಯಾಯಪೀಠವು ಒಮ್ಮತಕ್ಕೆ ಬರಲಾಗಲಿಲ್ಲ. ಹೀಗಾಗಿ, ಸರ್ವಿಸ್ ಅಧಿಕಾರ ಯಾರಿಗೆ ಸಿಗಬೇಕೆಂಬ ವಿಚಾರದ ನಿರ್ಣಯಕ್ಕಾಗಿ ಪ್ರಕರಣವನ್ನು ಸರ್ವೋಚ್ಚ ನ್ಯಾಯಲಯದ ತ್ರಿದಸ್ಯ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.