ಡಿಸೆಂಬರ್ ನಲ್ಲಿ ನಡೆದಿದ್ದ ಬುಲಂದ್ ಶಹರ್ ಗುಂಪು ಘರ್ಷಣೆಯಲ್ಲಿ ಹಾಡಹಗಲೇ ಪೋಲೀಸ್ ಅಧಿಕಾರಿ ಹತ್ಯೆ ನಡೆದಿದ್ದು ದೇಶಕ್ಕೆ ದೇಶವೇ ಬೆಚ್ಚಿ ಬೀಳುವಂತಾಗಿತ್ತು. ಈ ಹತ್ಯೆ ಬಳಿಕ ಯೋಗೇಶ್ ರಾಜ್ ರಹಸ್ಯ ಸ್ಥಳದಲ್ಲಿದ್ದುಕೊಂಡು ವೀಡಿಯೋ ಹರಿಯಬಿಟ್ಟಿದ್ದನು. ಕಾಡಿನ ನಡುವೆ ಹಸುವಿನ ಕಳೇಬರ ಪತ್ತೆಯಾದ ಬಳಿಕ ಸ್ಥಳೀಯ ಗುಂಪಿಗೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವ ಆರೋಪ ಯೋಗೇಶ್ ಮೇಲಿದೆ. ಘರ್ಷಣೆಗೆ ಮುನ್ನವೇ ಈತ ಪೋಲೀಸರಿಗೆ ಗೋಹತ್ಯೆ ಕುರಿತು ದೂರು ಸಲ್ಲಿಸಿದ್ದು ಆ ವೇಳೆ ಹತ್ತು ಮಂದಿ ಆರೋಪಿಗಳ ಹೆಸರು ಸೂಚಿಸಿದ್ದನೆನ್ನಲಾಗಿದೆ.