ಹಿರಿಯರ ಆದೇಶ ಧಿಕ್ಕರಿಸೋ ಕಾರ್ಮಿಕರನ್ನು ಒದ್ದು ಹೊರಗೆ ಹಾಕಲಾಗುತ್ತದೆ: ಮಧ್ಯಪ್ರದೇಶ ಸಚಿವ

ಸಹಕಾರ ನೀಡದ ಹಾಗೂ ಹಿರಿಯರ ಆದೇಶಗಳನ್ನು ಪಾಲನೆ ಮಾಡದ ಕಾರ್ಮಿಕರನ್ನು ಒದ್ದು ಹೊರಗೆ ಹಾಕಲಾಗುತ್ತದೆ ಎಂದು ಮಧ್ಯಪ್ರದೇಶ ಸಚಿವ ಗುರುವಾರ ಹೇಳಿದ್ದಾರೆ...
ಮಧ್ಯಪ್ರದೇಶ ರಾಜ್ಯ ಕಾರ್ಮಿಕ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ
ಮಧ್ಯಪ್ರದೇಶ ರಾಜ್ಯ ಕಾರ್ಮಿಕ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ
ಗುಣಾ (ಮಧ್ಯಪ್ರದೇಶ): ಸಹಕಾರ ನೀಡದ ಹಾಗೂ ಹಿರಿಯರ ಆದೇಶಗಳನ್ನು ಪಾಲನೆ ಮಾಡದ ಕಾರ್ಮಿಕರನ್ನು ಒದ್ದು ಹೊರಗೆ ಹಾಕಲಾಗುತ್ತದೆ ಎಂದು ಮಧ್ಯಪ್ರದೇಶ ಸಚಿವ ಗುರುವಾರ ಹೇಳಿದ್ದಾರೆ. 
ಮಧ್ಯಪ್ರದೇಶ ರಾಜ್ಯ ಕಾರ್ಮಿಕ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ ಅವರು ನೀಡಿರುವ ವಿವಾದಾತ್ಮಕ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. 
ಡಿಸೆಂಬರ್ 31 ರಂದು ಸಿಂಗ್ ಅವರು ಹೇಳಿಕೆ ನೀಡಿದ್ದು, ಸಹಕಾರ ನೀಡದ ಹಾಗೂ ಹಿರಿಯ ಅಧಿಕಾರಿಗಳ ಆದೇಶ ಪಾಲನೆ ಮಾಡದ ಕಾರ್ಮಿಕರು ಹಾಗೂ ಅಧಿಕಾರಿಗಳನ್ನು ಒದ್ದು ಹೊರಗೆ ಹಾಕಲಾಗುತ್ತೆದೆ ಎಂದು ಹೇಳಿದ್ದಾರೆ. ಆದರೆ, ಯಾವ ಸಂದರ್ಭದಲ್ಲಿ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆಂಬುದು ಸ್ಪಷ್ಟವಾಗಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com