ನಿರ್ದಿಷ್ಟ ಪಂಥದ ಆಚರಣೆಗಳು ಅದೇ ರೀತಿಯಲ್ಲಿ ಮುಂದುವರೆಯಬೇಕು, ನಿರ್ದಿಷ್ಟ ಸಮುದಾಯದ ಆಚರಣೆಗಳನ್ನು ಹಾಗೆಯೇ ಮುಂದುವರೆಸಲು ಬಿಡಬೇಕು. ಅದನ್ನೇ ಸಹಿಷ್ಣುತೆ ಎನ್ನುವುದು. ಅದೇ ರೀತಿಯಲ್ಲಿ ಶಬರಿಮಲೆಯಲ್ಲಿರುವ ದೇವರು ಬ್ರಹ್ಮಚಾರಿ ಸ್ವರೂಪದ್ದಾಗಿದೆ. ಅಲ್ಲಿನ ಆಚರಣೆಗಳ ಮೇಲೆ ಮಹಿಳೆಯರು ಏಕೆ ತಮ್ಮನ್ನು ತಾವು ಹೇರಿಕೆ ಮಾಡಬೇಕು? ಅಷ್ಟೇ ಅಲ್ಲದೇ ಅಲ್ಲಿನ ಆಚರಣೆಗಳು ಪುರುಷರಿಗೆ ಆಧ್ಯಾತ್ಮಿಕ ಹಾಗೂ ಮಾನಸಿಕವಾಗಿ ತರಬೇತಿ ನೀಡುವಂಥಹದ್ದಾಗಿವೆ. ಅಲ್ಲಿಗೆ ತೆರಳುವಾಗ 41 ದಿನಗಳ ವ್ರತಾಚರಣೆ ಮಾಡಬೇಕೆಂದಿದೆ. ಅದನ್ನು 28 ದಿನಕ್ಕೆ, 30 ದಿನಕ್ಕೆ, 20 ದಿನಕ್ಕೆ ಇಳಿಸುವುದು ಕೋರ್ಟ್ ನ ಕೆಲಸವೇ ಎಂದು ಮೀನಾಕ್ಷಿ ಲೇಖಿ ಪ್ರಶ್ನಿಸಿದ್ದಾರೆ.