ಗೋವಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿರೀಶ್ ಛೋಡಂಕರ್ ಅವರು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದು, ರಫೇಲ್ ಕಡತಗಳನ್ನು ಪರಿಕ್ಕರ್ ಮನೆಯಿಂದ ಹೊತ್ತೊಯ್ಯಲು ಯತ್ನಗಳು ನಡೆಯುವ ಸಾಧ್ಯತೆಗಳಿದ್ದು. ಇದರಿಂದಾಗಿ ಪರಿಕ್ಕರ್ ಅವರ ಜೀವಕ್ಕೆ ಅಪಾಯವಿದೆ. ಭ್ರಷ್ಟಾಚಾರ ಮುಚ್ಚಿಹಾಕಲು ಇಂತಹ ಯತ್ನಗಳು ನಡೆಯಬಹುದು ಎಂದು ತಿಳಿಸಿದ್ದಾರೆ.