ಸರ್ಕಾರದ ತಂತ್ರವೇನೆಂದರೆ, ಹೆಎಎಲ್'ನ್ನು ದುರ್ಬಲಗೊಳಿಸುವುದು, ಹಣ ನೀಡದೇ ಇರುವುದು, ಭಾರತೀಯ ಕಾರ್ಯತಂತ್ರದ ಸಾಮರ್ಥ್ಯವನ್ನು ನಾಶ ಮಾಡುವುದು, ಅನಿಲ್ ಅಂಬಾನಿಯವರಿಗೆ ಉಡುಗೊರೆ ನೀಡುವುದು. ಕೇಂದ್ರ ಸರ್ಕಾರ ಹೆಚ್ಎಎಲ್'ನ್ನು ಕಡೆಗಣಿಸುತ್ತಿದೆ. ಒಂದೇ ಒಂದು ವಿಮಾನವನ್ನು ನೀಡಲಿದ್ದರೂ ರಫೇಲ್ ಯುದ್ಧ ವಿಮಾನಗಳ ತಯಾರಿಗೆ ಡಸ್ಸಾಲ್ಟ್ ಏವಿಯೇಷನ್'ಗೆ ಸರ್ಕಾರ ರೂ.20,000 ಕೋಟಿ ನೀಡಿದೆ. ಹೆಚ್ಎಎಲ್'ಗೆ ನೀಡಬೇಕಿರುವ ರೂ.15,700 ಕೋಟಿಯನ್ನು ನೀಡಿಲ್ಲ.