ಅಹಾಮದಾಬಾದ್: ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಅವರು ಲೋಕಸಭೆ ಅಯ್ಕೆಯಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಎರಡು ರಾಜ್ಯ.ಸಭೆ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.
ಗುಜರಾತ್ನ ಎರಡು ರಾಜ್ಯಸಭಾ ಸೀಟುಗಳ ಉಪಚುನಾವಣೆಗೆ ಇಂದು ಶುಕ್ರವಾರ ಬೆಳಗ್ಗೆ 9 ಗಂಟೆಗೆ ಗಾಂಧೀನಗರದಲ್ಲಿನ ರಾಜ್ಯ ವಿಧಾನಸಭಾ ಸಂಕೀರ್ಣದಲ್ಲಿ ಮತದಾನ ಆರಂಭಗೊಂಡಿದೆ.
ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಬಿಜೆಪಿ ವಿದೇಶ ವ್ಯವಹಾರ ಸಚಿವ ಎಸ್ ಜೈಶಂಕರ್ ಅವರನ್ನು ಮತ್ತು ಒಬಿಸಿ ನಾಯಕ ಜುಗಲಾಜಿ ಠಾಕೋರ್ ಅವರನ್ನು ಕಣಕ್ಕೆ ಇಳಿಸಿದೆ. ಕಾಂಗ್ರೆಸ್ ಅಭ್ಯರ್ಥಿಗಳಾಗಿ ಚಂದ್ರಿಕಾ ಚುಡಾಸಮಾ ಮತ್ತು ಗೌರವ್ ಪಾಂಡ್ಯ ಕಣದಲ್ಲಿದ್ದಾರೆ.
ಗುಜರಾತ್ನ ಈ ಎರಡು ರಾಜ್ಯಸಭಾ ಸ್ಥಾನಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಯುತ್ತಿದ್ದು ಅಭ್ಯರ್ಥಿಗಳು ವಿಜಯಿಗಳಾಗಲು ಶೇ.50 ಮತ ಪಡೆಯಬೇಕಿದೆ.