ಪ್ರಸಕ್ತ ನಡೆಯುತ್ತಿರುವ ರಾಜ್ಯಸಭೆಯ ಅಧಿವೇಶನವನನ್ನೂ ಬರುವ ಆಗಸ್ಟ್ 7 ರವರೆಗೆ ವಿಸ್ತರಿಸಲಾಗಿದೆ ಎಂದು ಶುಕ್ರವಾರ ಪ್ರಕಟಿಸಲಾಗಿದೆ. ಶುಕ್ರವಾರ ಸದನ ಸಮಾವೇಶಗೊಂಡ ನಂತರ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು, ಸರ್ಕಾರದ ಕಲಾಪ, ಸಲಹಾ ಸಮಿತಿಯ ತೀರ್ಮಾನದಂತೆ, ರಾಜ್ಯಸಭೆಯ ಪ್ರಸ್ತುತ ಅಧಿವೇಶನ ಇಂದೇ ಕೊನೆಗೊಳ್ಳಬೇಕಿತ್ತು; ಆದರೆ ಅದನ್ನು ಆಗಸ್ಟ್ 7 ರವರೆಗೆ ವಿಸ್ತರಿಸಲಾಗಿದೆ ಎಂದರು.