ಮೂವರ ಹತ್ಯೆ ನಡೆದ ಜಾಗದಲ್ಲಿ ಪೊಲೀಸರ ಪರಿಶೀಲನೆ
ಮೂವರ ಹತ್ಯೆ ನಡೆದ ಜಾಗದಲ್ಲಿ ಪೊಲೀಸರ ಪರಿಶೀಲನೆ

ದೆಹಲಿ: ವಯೋವೃದ್ಧ ದಂಪತಿ ಮತ್ತು ಮನೆ ಕೆಲಸದಾಕೆಯ ಕತ್ತು ಸೀಳಿ ಬರ್ಬರ ಹತ್ಯೆ

ದೆಹಲಿಯ ವಸಂತ್ ವಿಹಾರ್ ನಲ್ಲಿ ಮೂವರನ್ನುಕತ್ತು ಸೀಳಿ ಹಾಡಹಗಲೇ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ...
ನವದೆಹಲಿ: ದೆಹಲಿಯ ವಸಂತ್ ವಿಹಾರ್ ನಲ್ಲಿ  ಮೂವರನ್ನುಕತ್ತು ಸೀಳಿ ಹಾಡಹಗಲೇ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷ್ಣು ಮಾತುರ್ ಮತ್ತು ಶಶಿ ಮಾತುರ್ ಹಾಗೂ ಮನೆ ಕೆಲಸದಾಕೆ ಖುಷ್ಬೂ ಅವರನ್ನು ಹತ್ಯೆ ಮಾಡಲಾಗಿದೆ,
ಬೆಳಗ್ಗೆ 8.40 ರ ಸುಮಾರಿಗೆ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗ್ಗೆ ಮತ್ತೊಬ್ಬ ಕೆಲಸದಾಕೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ,
ಹೊರಗಿನಿಂದ ಮನೆ ಬಾಗಿಲಿಗೆ ಬೋಲ್ಟ್ ಹಾಕಿರುವುದು ಕಂಡು ಬಂದಿದೆ,  ಮನೆ ಬಾಗಿಲು ತೆಗೆದು ಒಳಗೆ ಬಂದಾಗ ದಂಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ,  ಮನೆ ಪೂರ್ತಿ ದರೋಡೆ ಮಾಡಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com