ಛತ್ತೀಸ್ ಗಢ: ಕುಟುಂಬ ಸದಸ್ಯರ ಎದುರೇ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ ನಕ್ಸಲರು

ನಕ್ಸಲರು ಪೊಲೀಸ್ ಅಧಿಕಾರಿಯನ್ನು ಕುಟುಂಬ ಸದಸ್ಯರ ಎದುರೇ ಹತ್ಯೆ ಮಾಡಿರುವ ಘಟನೆ ಛತ್ತೀಸ್ ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಡೆದಿದೆ.
ಛತ್ತೀಸ್ ಗಢ: ಕುಟುಂಬ ಸದಸ್ಯರ ಎದುರೇ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ ನಕ್ಸಲರು
ಛತ್ತೀಸ್ ಗಢ: ಕುಟುಂಬ ಸದಸ್ಯರ ಎದುರೇ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ ನಕ್ಸಲರು
ರಾಯ್ ಪುರ್: ನಕ್ಸಲರು ಪೊಲೀಸ್ ಅಧಿಕಾರಿಯನ್ನು ಕುಟುಂಬ ಸದಸ್ಯರ ಎದುರೇ ಹತ್ಯೆ ಮಾಡಿರುವ ಘಟನೆ ಛತ್ತೀಸ್ ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಡೆದಿದೆ. 
ವಾರಕ್ಕೊಮ್ಮೆ ನಡೆಯುವ ಹಾತ್ ಬಜಾರ್ (ವಾರದ ಮಾರುಕಟ್ಟೆ)ಯಲ್ಲಿ ಈ ಘಟನೆ ನಡೆದಿದ್ದು, ಸಹಾಯಕ ಪೇದೆ ಚೈತು ರಾಮ್ ಮೃತರೆಂದು ಗುರುತಿಸಲಾಗಿದೆ. 
ಮಿರ್ತೂರ್ ನ ನಿವಾಸಿಯಾಗಿದ್ದ ಚೈತು ರಾಮ್ ಅವರು ಕುಟುಂಬ ಸದಸ್ಯರೊಂದಿಗೆ ಮಾರುಕಟ್ಟೆಗೆ ತೆರಳಿದ್ದರು. ಈ ವೇಳೆ ಮಾವೋವಾದಿಗಳ ತಂಡ ಮಾರಕಾಸ್ತ್ರಗಳಿಂದ ಚೈತುರಾಮ್ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ ಅವರ ಕುಟುಂಬ ಸದಸ್ಯರ ಮೇಲೆ ಯಾವುದೇ ದಾಳಿ ನಡೆಸಿಲ್ಲ. 
ಪೊಲೀಸ್ ಪೇದೆಯ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಕೊಲೆಗಡುಕ ನಕ್ಸಲರಿಗಾಗಿ ಶೋಧ ಕಾರ್ಯ ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com