ಸೂರತ್: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಗಂಗಾ ನದಿಗೆ ಬಿದ್ದು ಮೂವರು ಸ್ನೇಹಿತರು ದಾರುಣ ಸಾವನ್ನಪ್ಪಿರುವ ಘಟನೆ ರಿಷಿಕೇಶದಲ್ಲಿ ನಡೆದಿದೆ.
ಸೂರತ್ ಮೂಲದ ಮೂವರು ಸ್ನೇಹಿತರು ಉತ್ತರಖಂಡದ ಚಾರ್ದಾಮ್ ಯಾತ್ರ ಕೈಗೊಂಡಿದ್ದರು. ರಿಷಿಕೇಶದ ಬಳಿ ತೆಪ್ಪಾದಲ್ಲಿ ಹೋಗುತ್ತಿದ್ದಾಗ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು ಈ ವೇಳೆ ತೆಪ್ಪಾ ಉರುಳಿ ಮೂವರು ನದಿಗೆ ಬಿದ್ದು ಜಲ ಸಮಾಧಿಯಾಗಿದ್ದಾರೆ.
ಇನ್ನು ನೀರಿನಲ್ಲಿ ಮುಳುಗಿ ಮೃತಪಟ್ಟಿರುವವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.