ಸೋಪೋರ್ ಜಿಲ್ಲೆಯ ಮಗ್ರೆಪೋರಾ ದಲ್ಲಿ ಮಜೀದ್ ನನ್ನು ಬಂಧಿಸಿದ್ದು, ಈತನ ಸುಳಿವು ಕೊಟ್ಟವರಿಗೆ ಈ ಹಿಂದೆ 2 ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು. ಈ ಬಗ್ಗೆ ಮಾಹಿಚಿ ನೀಡಿರುವ ಡೆಪ್ಟುಟಿ ಕಮಿಷನರ್ ಆಫ್ ಪೊಲೀಸ್ ಸಂಜೀವ್ ಕುಮಾರ್ ಯಾದವ್ ಅವರು, ಶನಿವಾರ ಸಂಜೆ ಶ್ರೀನಗರದ ಸೌರಾದಲ್ಲಿ ಮಜೀದ್ ನನ್ನು ಬಂಧಿಸಲಾಗಿದೆ. ಪ್ರಸ್ತುತ ಆತನನ್ನು ದೆಹಲಿಗೆ ಕರೆತಂದಿದ್ದು, ಶ್ರೀನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಆತನನ್ನು ಪೊಲೀಸ್ ವಶಕ್ಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.