ಅಯೋಧ್ಯೆ ತೀರ್ಪು ಸ್ವಾಗತಿಸಿದ ಆರ್ ಎಸ್ ಎಸ್: ಸಮಾಜದಲ್ಲಿ ಶಾಂತಿಗೆ ಕರೆ ನೀಡಿದ ಮೋಹನ್ ಭಾಗವತ್ 

ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠ ಇಂದು ನೀಡಿರುವ ತೀರ್ಪನ್ನು ಆರ್ ಎಸ್ ಎಸ್ ಸ್ವಾಗತಿಸಿದೆ.
ಮೋಹನ್ ಭಾಗವತ್
ಮೋಹನ್ ಭಾಗವತ್

ಮುಂಬೈ: ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠ ಇಂದು ನೀಡಿರುವ ತೀರ್ಪನ್ನು ಆರ್ ಎಸ್ ಎಸ್ ಸ್ವಾಗತಿಸಿದೆ.

ತೀರ್ಪು ಹೊರಬೀಳುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಎಸ್ ಎಸ್ ಸರಸಂಘಸಂಚಾಲಕ ಮೋಹನ್ ಭಾಗವತ್, ಹಲವು ದಶಕಗಳಿಂದ ಮುಂದುವರೆದಿದ್ದ ಪ್ರಕರಣ ಸರಿಯಾಗಿ ಇತ್ಯರ್ಥಗೊಂಡಿದೆ. ಸುಪ್ರೀಂಕೋರ್ಟ್ ತೀರ್ಪುನ್ನು  ಸ್ವಾಗತಿಸುವುದಾಗಿ ತಿಳಿಸಿದರು.

ಇದನ್ನು ಗೆಲುವು ಅಥವಾ ಸೋಲು ಎಂದು ಪರಿಗಣಿಸಬಾರದು, ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡಲು ಪ್ರತಿಯೊಬ್ಬರು ಮುಂದಾಗುವಂತೆ ಮೋಹನ್ ಭಾಗವತ್ ಕರೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com