ಇವರು ಕ್ರೀಡಾಪಟುನಾ? ಇಮ್ರಾನ್ ಖಾನ್ 'ಭಯೋತ್ಪಾದಕರಿಗೆ ಆದರ್ಶ': ಪಾಕ್ ಪಿಎಂ ವಿರುದ್ಧ ಗಂಭೀರ್ ಕಿಡಿ

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಯೋತ್ಪಾದಕರಿಗೆ ಆದರ್ಶ. ಅವರನ್ನು ಕ್ರೀಡಾ ಸಮುದಾಯದಿಂದ ಬಹಿಷ್ಕಾರಿಸಬೇಕು ಎಂದು ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.
ಇಮ್ರಾನ್ ಖಾನ್-ಗೌತಮ್ ಗಂಭೀರ್
ಇಮ್ರಾನ್ ಖಾನ್-ಗೌತಮ್ ಗಂಭೀರ್

ನವದೆಹಲಿ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಯೋತ್ಪಾದಕರಿಗೆ ಆದರ್ಶ. ಅವರನ್ನು ಕ್ರೀಡಾ ಸಮುದಾಯದಿಂದ ಬಹಿಷ್ಕಾರಿಸಬೇಕು ಎಂದು ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.

ಕಳೆದ ವಾರ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ(ಯುಎನ್‌ಜಿಎ) ಇಮ್ರಾನ್ ಖಾನ್ ಕಾಶ್ಮೀರ ಕುರಿತು ಭಾಷಣ ಮಾಡಿದ್ದರು. ಈ ವಿಚಾರವಾಗಿ ಗರಂ ಆಗಿರುವ ಗೌತಮ್ ಗಂಭೀರ್, ಕ್ರಿಕೆಟಿಗ-ರಾಜಕಾರಣಿ, ಕ್ರೀಡಾಪಟುಗಳು "ಉತ್ತಮ ನಡವಳಿಕೆ" ಮತ್ತು "ಪಾತ್ರದ ಶಕ್ತಿ"ಯ ಮಾದರಿಗಳಾಗಿರಬೇಕು. ಆದಾಗ್ಯೂ, ಸ್ವತಃ ಮಾಜಿ ಕ್ರಿಕೆಟಿಗನಾಗಿದ್ದ ಇಮ್ರಾನ್ ಖಾನ್ "ಭಯೋತ್ಪಾದಕರಿಗೆ ಆದರ್ಶಪ್ರಾಯ" ಎಂದು ಕಿಡಿಕಾರಿದ್ದಾರೆ.

"ಕ್ರೀಡಾಪಟುಗಳು ರೋಲ್ ಮಾಡೆಲ್‌ಗಳಾಗಿರಬೇಕು, ಉತ್ತಮ ನಡವಳಿಕೆ, ತಂಡದ ಮನೋಭಾವ, ನೀತಿಶಾಸ್ತ್ರ, ಪಾತ್ರದ ಶಕ್ತಿ. ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಮಾಜಿ ಕ್ರೀಡಾಪಟು ಕೂಡ ಮಾತನಾಡುವುದನ್ನು ನಾವು ನೋಡಿದ್ದೇವೆ. ಅವರ ಮಾತುಗಳು ಭಯೋತ್ಪಾದಕರಿಗೆ ಸ್ಪೂರ್ತಿ ನೀಡುವಂತಿತ್ತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com