ಪಠಾಣ್ ಕೋಟ್: ಅಭಿನಂದನ್ ಮತ್ತು ನಾನು ಇಬ್ಬರೂ ಪಾಕಿಸ್ತಾನದ ವಿರುದ್ಧ ಹೋರಾಡಿದ್ದೇವೆ. ಅಭಿನಂದನ್ ತಂದೆಯೊಂದಿಗೂ ನಾನು ಕೆಲಸ ಮಾಡಿದ್ದೆ ಎಂದು ವಾಯು ಸೇನೆ ಮುಖ್ಯಸ್ಥ ಬಿಎಸ್ ಧನೋವಾ ಹೇಳಿದ್ದಾರೆ.
ಬಾಲಾಕೋಟ್ ವಾಯುದಾಳಿ ಬಳಿಕ ಕರ್ತವ್ಯಕ್ಕೆ ವಾಪಸ್ ಆದ ಮೇಲೆ ಮೊದಲ ಬಾರಿಗೆ ಅಭಿನಂದನ್ ಮಿಗ್ 21 ಕಾಕ್ ಪೀಟ್ ನಲ್ಲಿ ಕುಳಿತು ವಿಮಾನ ಹಾರಿಸಿದ್ದು, ಈ ವೇಳೆ ಭಿನಂದನ್ ವರ್ತಮಾನ್ ಗೆ ಸಹ ಪೈಲಟ್ ಆಗಿ ವಾಯು ಸೇನೆ ಮುಖ್ಯಸ್ಥ ಬಿಎಸ್ ಧನೋವಾ ವಿಮಾನ ನಿರ್ವಹಣೆ ಮಾಡಿದ್ದು ವಿಶೇಷವಾಗಿತ್ತು.
ವಿಮಾನ ಹಾರಾಟದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಏರ್ ಚೀಫ್ ಮಾರ್ಷಲ್ ಬಿ.ಎಸ್.ಧಾನೋವಾ, 'ಅಭಿನಂದನ್ ಅವರನ್ನು 6 ತಿಂಗಳ ನಂತರ ವಾಯುಸೇನೆಯಲ್ಲಿ ಸ್ವಾಗತಿಸಲಾಗುತ್ತಿದೆ. ಮಿಗ್ -21 ಸ್ಕಾಡ್ರರ್ನ್ ನಲ್ಲಿ ಅಭಿನಂದನ್ ಅವರನ್ನು ಮತ್ತೆ ಸ್ವಾಗತಿಸಲಾಗಿದೆ. ಅಭಿನಂದನ್ ಅವರೊಂದಿಗೆ ಮಿಗ್ 21 ರಲ್ಲಿ ಹಾರಲು ಖುಷಿಯಾಗುತ್ತದೆ. ನಾನು ಅಭಿನಂದನ್ ಅವರ ತಂದೆಯೊಂದಿಗೂ ನಾನು ಹಾರಾಟ ನಡೆಸಿದ್ದೆ. ನಮಗೆ ಒಂದು ಸಾಮ್ಯತೆ ಇದೆ. ನಾವಿಬ್ಬರೂ ಪಾಕಿಸ್ತಾನದ ವಿರುದ್ಧ ಹೋರಾಡಿದ್ದೆವು. ನಾನು ಕಾರ್ಗಿಲ್ ನಲ್ಲಿ ಮತ್ತು ಅಭಿನಂದನ್ ಬಾಲಕೋಟ್ ನಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿದ್ದೇವೆ. ಅಭಿನಂದನ್ ಅವರ ತಂದೆಯೊಂದಿಗೂ ನಾನು ಕೆಲಸ ಮಾಡಿದ್ದೇನೆ ಎಂದು ಹೇಳಿದರು.
Advertisement