ಚಿನ್ಮಾಯನಂದ್ ವಿರುದ್ಧ ಅತ್ಯಾಚಾರ ಆರೋಪ : ಸುಲಿಗೆ ಆರೋಪದಡಿ ಯುವತಿ ಎಸ್ ಐಟಿ ಕಸ್ಟಡಿಗೆ 

ಉತ್ತರ ಪ್ರದೇಶದ ಬಿಜೆಪಿ ಮುಖಂಡ ಸ್ವಾಮಿ ಚಿನ್ಮಾಯನಂದ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಕಾನೂನು ವಿದ್ಯಾರ್ಥಿಯನ್ನು ವಿಶೇಷ ತನಿಖಾ ದಳ ಇಂದು  ಕಸ್ಟಡಿಗೆ ತೆಗೆದುಕೊಂಡಿದೆ.
ಎಸ್ ಐಟಿ ಅಧಿಕಾರಿಗಳು
ಎಸ್ ಐಟಿ ಅಧಿಕಾರಿಗಳು

ಶಹಜಾನ್ಪುರ್ : ಉತ್ತರ ಪ್ರದೇಶದ ಬಿಜೆಪಿ ಮುಖಂಡ ಸ್ವಾಮಿ ಚಿನ್ಮಾಯನಂದ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಕಾನೂನು ವಿದ್ಯಾರ್ಥಿಯನ್ನು ವಿಶೇಷ ತನಿಖಾ ದಳ ಇಂದು  ಕಸ್ಟಡಿಗೆ ತೆಗೆದುಕೊಂಡಿದೆ.
 
ಬೆದರಿಕೆ ಹಾಗೂ ಸುಲಿಗೆ ಆರೋಪದ ಮೇರೆಗೆ 23  ವರ್ಷದ  ಕಾಲೇಜು ವಿದ್ಯಾರ್ಥಿನಿಯನ್ನು ಎಸ್ ಐಟಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೂವರು ಯುವಕರೊಂದಿಗೆ  ಸೇರಿ ಆಕೆ 5 ಕೋಟಿ ರೂಪಾಯಿಗಾಗಿ ಬೇಡಿಕೆ ಇಟ್ಟಿದ್ದರು ಎಂದು ಚಿನ್ಮಾಯನಂದ್ ಆರೋಪಿಸಿದ್ದಾರೆ.

ಮೂವರು ಯುವಕರು ಆಕೆಯ ಸಂಬಂಧಿಕರಾಗಿದ್ದು, ಅವರನ್ನು ಈಗಾಗಲೇ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಐಸ್ ಐಟಿ ಅಧಿಕಾರಿಗಳು  ಮೂವರು ಯುವಕರು ಹಾಗೂ ಆ ಯುವತಿಯನ್ನು ಮುಖಾಮುಖಿ ಪ್ರಶ್ನಿಸುವ ಸಾಧ್ಯತೆ ಇದೆ. 

ಅಲಹಾಬಾದ್  ಹೈಕೋರ್ಟಿನಲ್ಲಿ ಯುವತಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕೃತಗೊಂಡಿತ್ತು. ಜಿಲ್ಲಾ ನ್ಯಾಯಾಲಯದಲ್ಲಿಯೇ ಜಾಮೀನು ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ತಿಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com