ಕಾಂಗ್ರೆಸ್ ಜೊತೆ ಮಾತುಕತೆ ಬೇಕು ಎಂದಾದರೆ, ಬಿಜೆಪಿ ಸಖ್ಯ ತೊರೆಯಬೇಕು: ರೆಬೆಲ್ ಶಾಸಕರಿಗೆ ಸುರ್ಜೆವಾಲಾ ವಾರ್ನಿಂಗ್!

ಕಾಂಗ್ರೆಸ್ ಜೊತೆ ಚರ್ಚೆ ಬೇಕು ಎಂದರೆ, ಬಿಜೆಪಿ ಸಖ್ಯ ತೊರೆಯಬೇಕು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ರಂದೀಪ್ ಸುರ್ಜೇವಾಲಾ
ರಂದೀಪ್ ಸುರ್ಜೇವಾಲಾ
Updated on

ಜೈಸಲ್ಮೇರ್: ಕಾಂಗ್ರೆಸ್ ಜೊತೆ ಚರ್ಚೆ ಬೇಕು ಎಂದರೆ, ಬಿಜೆಪಿ ಸಖ್ಯ ತೊರೆಯಬೇಕು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

ರಾಜಸ್ಥಾನ ರಾಜಕೀಯ ಬಿಕ್ಕಿಟ್ಟನ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರು ಕಾಂಗ್ರೆಸ್ ಜೊತೆ ಚರ್ಚೆ ನಡೆಸಬೇಕು ಎಂದರೆ, ಮೊದಲು ಅವರು ಬಿಜೆಪಿ ಸಖ್ಯ ತೊರೆದು ಬರಬೇಕು. ಮೊದಲು ಅವರು ಇಲ್ಲಿಗೆ ಬರಬೇಕು. ಆಗ ಮಾತ್ರ ಅವರೊಂದಿಗೆ ಚರ್ಚೆ ನಡೆಸುತ್ತೇವೆ. ಇಲ್ಲವಾದಲ್ಲಿ ಅವರಿಗೆ ಪಕ್ಷದ ಬಾಗಿಲು ಮುಚ್ಚಲಾಗುತ್ತದೆ ಎಂದು ಹೇಳಿದ್ದಾರೆ.

ಹರ್ಯಾಣದ ಮಾನೇಸರ್ ನಲ್ಲಿ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಕುಮ್ಮಕ್ಕಿನ ಮೇರೆಗೆ ಪೊಲೀಸ್ ಭದ್ರತೆ ನೀಡಲಾಗಿದೆ ಎಂದೂ ಸುರ್ಜೇವಾಲ ಕಿಡಿಕಾರಿದರು.

ಇನ್ನು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಮಾತನಾಡಿದ ಅವರು, ಸುಶಾಂತ್ ಪ್ರಕರಣದಲ್ಲಿ ಬಿಹಾರ ಪೊಲೀಸರು ಮಧ್ಯ ಪ್ರವೇಶಿಸಿರುವ ಸರಿಯಲ್ಲ. ಇದು ಮುಂಬೈ ಪೊಲೀಸರ ವ್ಯಾಪ್ತಿಯ ಪ್ರಕರಣವಾಗಿದ್ದು, ಅವರೇ ತನಿಖೆ ನಡೆಸಲಿದ್ದಾರೆ. ಇಂತಹ ಪರಿಸ್ಥಿತಿಗಳಿಂದ ಅರಾಜಕತೆ ಸೃಷ್ಟಿಯಾಗುತ್ತದೆ ಎಂದು ಸುರ್ಜೇವಾಲ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com