ಎನ್‌ಆರ್‌ಸಿ ವಿರುದ್ಧ ನಿರ್ಣಯ ಅಂಗೀಕರಿಸಿದ ಮೊದಲ ಎನ್‌ಡಿಎ ಆಡಳಿತದ ರಾಜ್ಯ ಬಿಹಾರ!

ರಾಜ್ಯದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಅನುಷ್ಠಾನದ ವಿರುದ್ಧ ಬಿಹಾರ ವಿಧಾನಸಭೆ ಮಂಗಳವಾರ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತು.. 
ನಿತೀಶ್ ಕುಮಾರ್
ನಿತೀಶ್ ಕುಮಾರ್
Updated on

ಪಾಟ್ನಾ: ರಾಜ್ಯದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಅನುಷ್ಠಾನದ ವಿರುದ್ಧ ಬಿಹಾರ ವಿಧಾನಸಭೆ ಮಂಗಳವಾರ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತು..

ರಾಜ್ಯದಲ್ಲಿ 2010 ರ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ (ಎನ್‌ಪಿಆರ್) ಹಳೆಯ ಸ್ವರೂಪವನ್ನು ಮಾತ್ರ ಜಾರಿಗೆ ತರಲು ಸಹ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರವಾಗಿದೆ.

ನೂತನ ಎನ್‌ಪಿಆರ್ ಅನುಷ್ಠಾನದ ವಿರುದ್ಧ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ನಿಲುವನ್ನು ಪುನರುಚ್ಚರಿಸಿದ ನಂತರ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಎನ್‌ಪಿಆರ್‌ನಕೆಲವು ವಿವಾದಾತ್ಮಕ ಷರತ್ತುಗಳನ್ನು ಕೈಬಿಡುವಂತೆ ಕೋರಿ ಬಿಹಾರ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದಿದೆ ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.

ಗೊಂದಲವನ್ನು ಹೋಗಲಾಡಿಸಲುಪ್ರಧಾನಿ ನರೇಂದ್ರ ಮೋದಿಯವರ ಡಿಸೆಂಬರ್ 22, 2019 ರ ಭಾಷಣವನ್ನು ಸಹ ಕೇಳಿದ್ದಾರೆ. ಅದರಲ್ಲಿ ಎನ್‌ಆರ್‌ಸಿ ದೇಶವ್ಯಾಪಿ ಅನುಷ್ಠಾನವನ್ನು ಪ್ರಧಾನಿ ಮೋದಿ ನಿರಾಕರಿಸಿದ್ದಾರೆ.

ಎನ್‌ಪಿಆರ್‌ನಲ್ಲಿ ಟ್ರಾನ್ಸ್‌ಜೆಂಡರ್‌ಗಳನ್ನು ಸೇರಿಸಲು ಪ್ರಸ್ತಾಪಿಸಲಾಗಿದೆ ಎಂದ ನಿತೀಶ್ ಕುಮಾರ್ ವಿಧಾನಸಭೆಯಲ್ಲಿ ಎನ್‌ಪಿಆರ್‌ನ ಹೊಸ ಸ್ವರೂಪದ ವಿರುದ್ಧ ಗಿ ನಿರ್ಣಯವನ್ನು ಕೋರಿದರು, ವಿಶೇಷವಾಗಿ ಪೋಷಕರ ಜನ್ಮಸ್ಥಳ ಮತ್ತು ದಿನಾಂಕದ ಬಗ್ಗೆ ವಿವರಗಳನ್ನು ಕೋರುವ ಷರತ್ತಿನ ಬಗ್ಗೆ ಅವರು ಆಕ್ಷೇಪಿಸಿದ್ದಾರೆ.

ಗಮನಾರ್ಹ ಬೆಳವಣಿಗೆಯಲ್ಲಿ ಸಿಎಂ ನಿತೀಶ್ ಕುಮಾರ್ ಅವರ ನಿಲುವನ್ನು ಡಿಸಿಎಂ ಹಾಗೂ ಬಿಜೆಪಿಯ  ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಅವರು ವಿಧಾನಸಭೆಯಲ್ಲಿ ಬೆಂಬಲಿಸಿದರು. ಎನ್‌ಪಿಆರ್ ಕುರಿತು ಮಾತನಾಡಿದ ಕುಮಾರ್, ತನ್ನ ತಾಯಿ ಯಾವಾಗ ಜನಿಸಿದನೆಂದು ತನಗೆ ತಿಳಿದಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com