ಚಿತ್ತೂರು: ತಿರುಮಲ, ತಿರುಪತಿ ದೇವಸ್ಥಾನಂ (ಟಿಟಿಡಿಯ) ಆಗಮ ಶಾಸ್ತ್ರಗಳಿಗೆ ಅಧಿಕಾರಿಗಳಾಗಿರುವ ಜೀಯರ್ ಒಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
ಜೀಯರ್ ಗಳೆಂದರೆ ರಾಮಾನುಜಾಚಾರ್ಯರ ಅನುಯಾಯಿ ಪರಂಪರೆಗೆ ಸೇರಿದವರಾಗಿದ್ದು ತಿರುಪತಿ ದೇವಾಲಯದಲ್ಲಿ ಅನುಸರಿಸಲಾಗುವ ಪೂಜಾ ವಿಧಾನವಾದ ವೈಷ್ಣವ, ವೈಖಾನಸ ಆಗಮ ಪ್ರಕಾರಕ್ಕೆ ಜೀಯರ್ ಗಳೇ ಅಧಿಕಾರಿಗಳಾಗಿದ್ದು, ಅವರ ಮಾರ್ಗದರ್ಶನದಂತೆಯೇ ಪೂಜಾ ವಿಧಾನಗಳು ನೆರವೇರಿಸಲ್ಪಡುತ್ತವೆ.
ಜೀಯರ್ ಗೆ ಕೊರೋನಾದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕೋವಿಡ್-19 ಪರೀಕ್ಷೆಗೊಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದ್ದು ತಕ್ಷಣವೇ ಅವರನ್ನು ಶ್ರೀವೆಂಕಟೇಶ್ವರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನ ಆಸ್ಪತ್ರೆಯ ಐಸೊಲೇಷನ್ ಗೆ ದಾಖಲಿಸಲಾಗಿದೆ ಎಂದು ಟಿಟಿಡಿ ತಿಳಿಸಿದೆ.
Advertisement