ಜಗತ್ತಿನ ಎಲ್ಲ ಜನರ ಆರೋಗ್ಯಕ್ಕಾಗಿ ತಿರುಮಲದಲ್ಲಿ 26 ರಿಂದ ಮೂರು ದಿನಗಳ ಧನ್ವಂತರಿ ಮಹಾಯಾಗ

ಜಗತ್ತಿನ ಎಲ್ಲ ಜನರ ಆರೋಗ್ಯರಕ್ಷಣೆಗಾಗಿ ಈ ತಿಂಗಳ 26 ರಿಂದ 28ರವರೆಗೆ ಧನ್ವಂತರಿ ಮಹಾಯಾಗ ನಡೆಸಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನ  ಶುಕ್ರವಾರ  ಪ್ರಕಟಿಸಿದೆ. 
ತಿರುಪತಿ ವೆಂಕಟೇಶ್ವರ
ತಿರುಪತಿ ವೆಂಕಟೇಶ್ವರ
Updated on

ತಿರುಮಲ: ಜಗತ್ತಿನ ಎಲ್ಲ ಜನರ ಆರೋಗ್ಯರಕ್ಷಣೆಗಾಗಿ ಈ ತಿಂಗಳ 26 ರಿಂದ 28ರವರೆಗೆ ಧನ್ವಂತರಿ ಮಹಾಯಾಗ ನಡೆಸಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನ ಶುಕ್ರವಾರ ಪ್ರಕಟಿಸಿದೆ. 

ತಿರುಮಲದಲ್ಲಿನ ಧರ್ಮಗಿರಿ ವೇದ ಪಾಠ ಶಾಲೆಯಲ್ಲಿ ಶ್ರೀನಿವಾಸ ಶಾಂತ್ಯೋತ್ಸವ ಸಹಿತ ಧನ್ವಂತರಿ ಯಾಗ ನಡೆಸಲಾಗುವುದು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ. 

ಚೀನಾದಲ್ಲಿ ಹುಟ್ಟಿದ ಕೊರೋನಾ ವೈರಸ್‌ನಿಂದ ಇಡೀ ಜಗತ್ತು ಭಯ ಭೀತಗೊಂಡಿದೆ. ಎಲ್ಲಾ ಕಾಯಿಲೆಗಳನ್ನು ಗುಣಪಡಿಸುವ ಅತ್ಯಂತ ಶಕ್ತಿಶಾಲಿಯಾದ ಧನ್ವಂತರಿ ಶ್ರೀ ಮಹಾ ವಿಷ್ಣುವಿನ ಒಂದು ರೂಪವಾಗಿದ್ದಾನೆ. ಈ ಯಾಗ ನಡೆಸುವ ಮೂಲಕ ಮಾನವನಿಗೆ ಒದಗಿರುವ ಸಂಕಷ್ಟ ತರುವ ವ್ಯಾಧಿಗಳು ಪರಿಹಾರಗೊಳ್ಳಲಿವೆ ಎಂದು ನಂಬಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com