ಬೇಹುಗಾರಿಕೆ: 24 ಗಂಟೆಯಲ್ಲಿ ದೇಶ ಬಿಡುವಂತೆ ಪಾಕ್ ಹೈ ಕಮೀಷನ್ ಅಧಿಕಾರಿಗಳಿಗೆ ಖಡಕ್ ಸೂಚನೆ!

ಬೇಹುಗಾರಿಕೆ ನಡೆಸಿದ ಆರೋಪ ಪಾಕಿಸ್ತಾನದ ಇಬ್ಬರು ಹೈ ಕಮೀಷನ್ ಅಧಿಕಾರಿಗಳಿಗೆ 24 ಗಂಟೆಗಳಲ್ಲಿ ಭಾರತ ಬಿಟ್ಟು ತೊಲಗುವಂತೆ ವಿದೇಶಾಂಗ ಸಚಿವಾಲಯ ಸೂಚಿಸಿದೆ.
ಅಬಿದ್ ಹುಸೇನ್-ತಾಹೀರ್ ಖಾನ್
ಅಬಿದ್ ಹುಸೇನ್-ತಾಹೀರ್ ಖಾನ್
Updated on

ನವದೆಹಲಿ: ಬೇಹುಗಾರಿಕೆ ನಡೆಸಿದ ಆರೋಪ ಪಾಕಿಸ್ತಾನದ ಇಬ್ಬರು ಹೈ ಕಮೀಷನ್ ಅಧಿಕಾರಿಗಳಿಗೆ 24 ಗಂಟೆಗಳಲ್ಲಿ ಭಾರತ ಬಿಟ್ಟು ತೊಲಗುವಂತೆ ವಿದೇಶಾಂಗ ಸಚಿವಾಲಯ ಸೂಚಿಸಿದೆ.

ಭಾರತದಲ್ಲಿ ಪಾಕ್ ಹೈ ಕಮೀಷನ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಅಧಿಕಾರಿಗಳು ಬೇಹುಗಾರಿಕೆ ನಡೆಸುತ್ತಿದ್ದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ದೇಶ ತೊರೆಯುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪಾಕ್ ಹೈ ಕಮೀಷನ್ ಅಧಿಕಾರಿಗಳಾದ ಅಬಿದ್ ಹುಸೇನ್ ಮತ್ತು ತಾಹೀರ್ ಹುಸೇನ್ ಎಂಬವರು ಬೇಹುಗಾರಿಕೆ ನಡೆಸುತ್ತಿದ್ದಾಗಲೇ ಭದ್ರತಾಪಡೆ ಸಿಬ್ಬಂದಿ ಸಾಕ್ಷಿ ಸಮೇತ ಹಿಡಿದಿದ್ದರು. 

ಇದೇ ವೇಳೆ ಇಬ್ಬರು ಅಧಿಕಾರಿಗಳು ನಕಲಿ ಭಾರತೀಯ ಗುರುತು ಚೀಟಿಗಳನ್ನು ಎಲ್ಲೆಡೆ ಬಳಸಿದ್ದಾರೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com