ಬಿಜೆಪಿ ಅದರ ಸಿದ್ಧಾಂತದ ವಿರುದ್ಧ ನಮ್ಮ ಹೋರಾಟ: ಒಮರ್ ಅಬ್ದುಲ್ಲಾ

ನಮ್ಮ ಹೋರಾಟ ದೇಶದ ವಿರುದ್ಧ ಅಲ್ಲ, ಬಿಜೆಪಿ ಹಾಗೂ ಅದರ ಸಿದ್ಧಾಂತದ ವಿರುದ್ಧ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಒಮರ್ ಅಬ್ದುಲ್ಲಾ
ಒಮರ್ ಅಬ್ದುಲ್ಲಾ
Updated on

ಕಾರ್ಗಿಲ್: ನಮ್ಮ ಹೋರಾಟ ದೇಶದ ವಿರುದ್ಧ ಅಲ್ಲ, ಬಿಜೆಪಿ ಹಾಗೂ ಅದರ ಸಿದ್ಧಾಂತದ ವಿರುದ್ಧ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಕಾರ್ಗಿಲ್ ನಲ್ಲಿ ಸ್ಥಳೀಯ ಮುಖಂಡರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಮ್ಮ ದೇಶವಲ್ಲಾ, ಸಂವಿಧಾನದಲ್ಲಿ ಬರೆದಿರುವುದನ್ನು ಮರಳಿ ಪಡೆಯುವ ತನಕ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

ಒಮರ್ ಅಬ್ದುಲ್ಲಾ ನೇತೃತ್ವದ ಫೀಪಲ್ಸ್  ಅಲೈಯನ್ಸ್  ಇಂದು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ ಮುಖಂಡರನ್ನು ಭೇಟಿ ಮಾಡಿತು. 2019 ಆಗಸ್ಟ್ 5ರ ಹಿಂದೆ ಇದ್ದ ವಿಶೇಷ ಸ್ಥಾನ ಮಾನವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ನಾವೆಲ್ಲಾ ಒಂದಾಗಿದ್ದೇವೆ ಎಂದು ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ಅಬ್ದುಲ್ಲಾ ಹೊರತುಪಡಿಸಿದಂತೆ ಗುಲಾಮ್ ನಬಿ ಲೋನ್ ಹಂಜುರಾ, ನಾಸಿರ್ ಅಸ್ಲಂ ವಾನಿ, ಮುಜಾಫರ್ ಷಾ ಮತ್ತು ವಹೀದ್ ಪರ್ರಾ ಮತ್ತಿತರರು ಈ ನಿಯೋಗದಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com