ಉತ್ತರ ಪ್ರದೇಶ: ಸವರ್ಣಿಯರು ಬಳಸುತ್ತಿದ್ದ ಹ್ಯಾಂಡ್‌ಪಂಪ್ ಬಳಸಿದ್ದಕ್ಕಾಗಿ ದಲಿತ ವ್ಯಕ್ತಿಗೆ ಥಳಿತ!

ಸವರ್ಣಿಯರು ಬಳಕೆ ಮಾಡುತ್ತಿದ್ದ ಹ್ಯಾಂಡ್ ಪಂಪ್ ನ್ನು ಬಳಸಿದ್ದಕ್ಕಾಗಿ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆದ ಘಟಕೆ ಉತ್ತರ ಪ್ರದೇಶದ ಬಾಂದಾದಲ್ಲಿ ವರದಿಯಾಗಿದೆ. 
ಥಳಿತ (ಸಾಂದರ್ಭಿಕ ಚಿತ್ರ)
ಥಳಿತ (ಸಾಂದರ್ಭಿಕ ಚಿತ್ರ)

ಬಾಂದ: ಸವರ್ಣಿಯರು ಬಳಕೆ ಮಾಡುತ್ತಿದ್ದ ಹ್ಯಾಂಡ್ ಪಂಪ್ ನ್ನು ಬಳಸಿದ್ದಕ್ಕಾಗಿ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆದ ಘಟಕೆ ಉತ್ತರ ಪ್ರದೇಶದ ಬಾಂದಾದಲ್ಲಿ ವರದಿಯಾಗಿದೆ. 

ಸರ್ಕಾರದಿಂದ ಈ ಹ್ಯಾಂಡ್ ಪಂಪ್ ನ್ನು ಅಳವಡಿಕೆ ಮಾಡಲಾಗಿತ್ತು. ಬಿಸಾಂದ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 

ತೆಂದುರಾ ಗ್ರಾಮದಲ್ಲಿ ನಾನು ನೀರು ತರುವುದಕ್ಕಾಗಿ ಹ್ಯಾಂಡ್ ಪಂಪ್ ನ್ನು ಬಳಸಿದಾಗ ರಾಮ್ ದಯಾಳ್ ಯಾದವ್ ಎಂಬ ವ್ಯಕ್ತಿಯ ಕುಟುಂಬ ಸದಸ್ಯರು ನನ್ನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ರಾಮಚಂದ್ರ ರೈದಾಸ್ ದೂರು ನೀಡಿರುವುದಾಗಿ ಎಸ್ ಹೆಚ್ಒ ನರೇಂದ್ರ ಪ್ರತಾಂಪ್ ಸಿಂಗ್ ಮಾಹಿತಿ ನೀಡಿದ್ದಾರೆ. 

ಗಾಯಗೊಂಡ ರೈದಾಸ್ ನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. 2 ತಿಂಗಳ ಹಿಂದೆಯೂ ಹ್ಯಾಂಡ್ ಪಂಪ್ ನಿಂದ ನೀರು ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಘರ್ಷಣೆಗಳಾಗಿದ್ದವು. ಆ ನಂತರ ವಿಭಾಗೀಯ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ವಿವಾದವನ್ನು ಬಗೆಹರಿಸಲಾಗಿತ್ತು ಎಂಬ ಮಾಹಿತಿಯೂ ಬಹಿರಂಗವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com