ತಿರುಚ್ಚಿ: ತಮಿಳುನಾಡು ಸರ್ಕಾರಿ ಕಚೇರಿಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ವಿವಿಧ ಕಚೇರಿಳಲ್ಲಿ ಸಂಗ್ರಹಿಸುತ್ತಿರುವ ಲಂಚದ ಬಗ್ಗೆ ಮಕ್ಕಳ್ ನೀಧಿ ಮೈಯ್ಯುಮ್ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಪಟ್ಟಿ ಬಿಡುಗಡೆ ಮಾಡಿದ್ದಾರೆ.
2021ರ ತಮಿಳುನಾಡು ವಿಧಾನಸಭೆ ಚುನಾವಣೆಗಾಗಿ ಸಿದ್ಧತೆ ನಡೆಸುತ್ತಿರುವ ಕಮಲ್ ಹಾಸನ್, ಭಾನುವಾರ ಮೊದಲ ಹಂತವಾಗಿ ನಗರದ ವಿವಿಧ ಪ್ರದೇಶಗಳಲ್ಲಿ ಪ್ರಚಾರ ನಡೆಸಿದರು.
"ರಾಜ್ಯದಲ್ಲಿ 50 ವರ್ಷಗಳ ದ್ರಾವಿಡ ಆಳ್ವಿಕೆಯಲ್ಲಿ, ನಾವು ಒಳ್ಳೆಯದಕ್ಕಿಂತ ಕೆಟ್ಟದ್ದನ್ನು ಪಡೆದುಕೊಂಡಿದ್ದೇವೆ, ಮಕ್ಕಳ್ ನೀಧಿ ಮೈಯಾಂ ಕೂಡ ದ್ರಾವಿಡ ಪಕ್ಷವಾಗಿದೆ. ಯಾರು ತಮಿಳು ಮಾತನಾಡುತ್ತಾರೋ ಅವರೆಲ್ಲಾ ದ್ರಾವಿಡರು ಎಂದು ಕಮಲ್ ಹಾಸನ್ ಸೋಮವಾರ ಹೇಳಿದ್ದಾರೆ.
ತಮ್ಮ ಸುದ್ದಿಗೋಷ್ಠಿ ವೇಳೆ ಸರ್ಕಾರಿ ಕಚೇರಿಯಲ್ಲಿ ಒದಗಿಸುವ ವಿವಿಧ ಸೇವೆಗಳಿಗೆ ಸಂಗ್ರಹಿಸಿದ ಲಂಚದ ದರಗಳ ಬಗ್ಗೆ ಮಾಹಿತಿ ನೀಡಿದರು. ಮೂರನೇ ಮೈತ್ರಿ ನಿರ್ಧಾರವಾದರ್ ಕಮಲ್ ಹಾಸನ್ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ ಮುರುಗನ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ.
Advertisement