ನವದೆಹಲಿ: ದೆಹಲಿ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಲ್ಲಿ ಓರ್ವನಾಗಿರುವ ವಿನಯ್ ಶರ್ಮಾ ಜೈಲಿನ ಗೋಡೆಗೆ ತಲೆ ಹೊಡೆದುಕೊಂಡು ಗಾಯಗೊಂಡಿರುವ ಘಟನೆ ನಡೆದಿದೆ.
ಕಳೆದ ಭಾನುವಾರ ಜೈಲಿನ ಗೋಡೆಗಳಿಗೆ ಅಪರಾಧಿ ವಿನಯ್ ತಲೆಯನ್ನು ಹೊಡೆದುಕೊಂಡಿದ್ದು, ಬಳಿಕ ಜೈಲು ಸಿಬ್ಬಂದಿ ತಡೆದಿದ್ದಾರೆಂದು ವರದಿಗಳು ತಿಳಿಸಿವೆ.
ಗೋಡೆಗೆ ತಲೆ ಹೊಡೆದುಕೊಂಡ ಪರಿಣಾಮ ವಿನಯ್ ತಲೆಗೆ ಅಲ್ಪ ಪ್ರಮಾಣದ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.
ಗಲ್ಲು ಶಿಕ್ಷೆಯಾಗಿರುವ ನಿರ್ಭಯಾ ಪ್ರಕರಣದ ಅಪರಾಧಿ ವಿನಯ್ ಶರ್ಮಾ ಜೈಲಿನಲ್ಲಿ ಉಪವಾಸ ಸತ್ಯಾಗ್ರ ನಡೆಸುತ್ತಿದ್ದಾನೆ.
ಈ ನಡುವೆ ವಿನಯ್ ಮೇಲೆ ಜೈಲಿನಲ್ಲಿ ಹಲ್ಲೆ ನಡೆಸಲಾಗಿದೆ. ಇದರ ಪರಿಣಾಮ ಆತ ಗಾಯಗೊಂಡಿದ್ದಾರೆ. ಅಲ್ಲದೆ, ಮಾನಸಿಕ ಕಾಯಿಲೆಯಿಂದಲೂ ಆತ ಗಾಯಗೊಂಡಿದ್ದಾರೆ. ಹೀಗಾಗಿ ಗಲ್ಲು ಶಿಕ್ಷೆ ರದ್ದು ಮಾಡಬೇಕೆಂದು ವಿನಯ್ ಶರ್ಮಾ ಪರವಕೀಲರು ಹೇಳಿದ್ದರು. ಬಳಿಕ ವಿನಯ್ ಶರ್ಮಾನ್ನು ಸರಿಯಾಗಿ ನೋಡಿಕೊಳ್ಳುವಂತೆ ಜೈಲಿನ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿತ್ತು.
Advertisement