ಮಹಾ ಶಿವರಾತ್ರಿ: ಜನತೆಗೆ ರಾಷ್ಟ್ರಪತಿ, ಪ್ರಧಾನಿ ಶುಭಹಾರೈಕೆ

ಮಹಾ ಶಿವರಾತ್ರಿ ಅಂಗವಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಹಾರೈಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಹಾ ಶಿವರಾತ್ರಿ ಅಂಗವಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಹಾರೈಸಿದ್ದಾರೆ.

ಟ್ವೀಟ್ ನಲ್ಲಿ ರಾಷ್ಟ್ರಪತಿಗಳು, ದೇಶದ ನಾಗರಿಕರಿಗೆ ಮಹಾ ಶಿವರಾತ್ರಿ ಶುಭಾಶಯಗಳು, ಶಿವನ ಆಶೀರ್ವಾದಿಂದ ಎಲ್ಲರ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಸಮೃದ್ಧಿ ತರಲಿ ಎಂದು ಹೇಳಿದ್ದಾರೆ.

ಈ ಶಿವರಾತ್ರಿಯಲ್ಲಿ ನಾವು ನಮ್ಮ ಮನೆಗಳನ್ನು , ದೇವಾಲಯಗಳನ್ನು ಬೆಳಗಿಸುವಾಗ, ನಮ್ಮೊಳಗಿನ ಮತ್ತು ಹೊರಗಿನ ಅನೇಕ ದುಷ್ಕೃತ್ಯಗಳ ವಿರುದ್ಧ ಹೋರಾಡುವ ಬುದ್ಧಿವಂತಿಕೆ ಮತ್ತು ಧೈರ್ಯ ದಯಪಾಲಿಸುವಂತೆ ಶಿವನನ್ನು ಪ್ರಾರ್ಥಿಸೋಣ ಎಂದೂ ಉಪರಾಷ್ಟ್ರಪತಿ ನಾಯ್ಡು ಟ್ವೀಟ್‌ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com