ಕೇವಲ 5 ರೂಪಾಯಿಗಾಗಿ ಆಟೋ ಡ್ರೈವರ್ ಭೀಕರ ಕೊಲೆ!

ಪಶ್ಚಿಮ ಉಪನಗರ ಬೊರಿವಾಲಿಯ ಗ್ಯಾಸ್ ಸ್ಟೇಷನ್ ನೌಕರರು ಕೇವಲ 5 ರುಪಾಯಿಗಾಗಿ ಆಟೋ ಡ್ರೈವರ್ ಮೇಲೆ ಹಲ್ಲೆ ನಡೆಸಿದ್ದು ಪರಿಣಾಮ 68 ವರ್ಷದ ಆಟೋ ಡ್ರೈವರ್ ಮೃತಪಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಪಶ್ಚಿಮ ಉಪನಗರ ಬೊರಿವಾಲಿಯ ಗ್ಯಾಸ್ ಸ್ಟೇಷನ್ ನೌಕರರು ಕೇವಲ 5 ರುಪಾಯಿಗಾಗಿ ಆಟೋ ಡ್ರೈವರ್ ಮೇಲೆ ಹಲ್ಲೆ ನಡೆಸಿದ್ದು ಪರಿಣಾಮ 68 ವರ್ಷದ ಆಟೋ ಡ್ರೈವರ್ ಮೃತಪಟ್ಟಿದ್ದಾರೆ.

ತಮ್ಮ ಆಟೋದ ಗ್ಯಾಸ್ ತುಂಬಿಸಿಕೊಳ್ಳಲು ರಾಮ್ದುಲ್ಲಾ ಸರ್ಜು ಯಾದವ್ ಅವರು ಸಿಎನ್ ಡಿ ಸ್ಟೇಷನ್ ಗೆ ಹೋಗಿದ್ದಾರೆ. ಈ ವೇಳೆ 205 ರುಪಾಯಿಗೆ ಗ್ಯಾಸ್ ತುಂಬಿಸಿಕೊಂಡು 500 ರುಪಾಯಿ ನೀಡಿದ್ದಾರೆ. 

ಈ ವೇಳೆ ಚಿಲ್ಲರೆ ಕೊಡದೆ ಗ್ಯಾಸ್ ಸ್ಟೇಷನ್ ಸಿಬ್ಬಂದಿ ಹೆಚ್ಚುವರಿಯಾಗಿ 5 ರುಪಾಯಿ ನೀಡಿ ಉಳಿದ ಚಿಲ್ಲರೆಯನ್ನು ನೀಡುವುದಾಗಿ ಹೇಳಿದ್ದಾರೆ. ಈ ವೇಳೆ ಚಿಲ್ಲರೆ ಇಲ್ಲದೆ ರಾಮ್ದುಲ್ಲಾ ಮತ್ತು ಸಿಬ್ಬಂದಿ ನಡುವೆ ಮಾತಿನ ಚಕಮಿಕಿ ನಡೆದಿದೆ. 

ಕೋಪಗೊಂಡ ಸಿಬ್ಬಂದಿ ರಾಮ್ದುಲ್ಲಾರ್ ಮೇಲೆ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರಾಲ್ದುಲ್ಲಾರ್ ರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಸಂಬಂಧ ಐವರು ಗ್ಯಾಸ್ ಸ್ಟೇಷನ್ ಸಿಬ್ಬಂದಿಯನ್ನು ಅವರ ವಿರುದ್ಧ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com