ದೆಹಲಿ ಹಿಂಸಾಚಾರ: ಪರೀಕ್ಷೆ ಬರೆಯಲು ಹೋದ ಬಾಲಕಿ ನಾಪತ್ತೆ

ಈಶಾನ್ಯ ದೆಹಲಿಯಲ್ಲಿ ಸಿಎಎ, ಎನ್​ಆರ್​ಸಿ ಪರ ವಿರೋಧದ ಪ್ರತಿಭಟನೆ ವೇಳೆ 13 ವರ್ಷದ ಬಾಲಕಿ ಕಾಣೆಯಾಗಿರುವುದು ವರದಿಯಾಗಿದೆ
ದೆಹಲಿ ಹಿಂಸಾಚಾರ
ದೆಹಲಿ ಹಿಂಸಾಚಾರ
Updated on

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಸಿಎಎ, ಎನ್​ಆರ್​ಸಿ ಪರ ವಿರೋಧದ ಪ್ರತಿಭಟನೆ ವೇಳೆ 13 ವರ್ಷದ ಬಾಲಕಿ ಕಾಣೆಯಾಗಿರುವುದು ವರದಿಯಾಗಿದೆ.

ಸೋನಿಯಾ ವಿಹಾರದ ಬಳಿ ವಾಸಿಸುತ್ತಿರುವ ಕುಟುಂಬದ 13 ವರ್ಷದ ಹೆಣ್ಣು ಮಗಳು ಸೋಮವಾರದಂದು ಖಜುರಿ ಖಾಸ್​ನಲ್ಲಿರುವ ಶಾಲೆಯಲ್ಲಿ ಪರೀಕ್ಷೆ ಬರೆಯುವುದಕ್ಕಾಗಿ ತೆರಳಿದ್ದಳು.

8ನೇ ತರಗತಿ ಓದುತ್ತಿರುವ  ಸೋನಿಯಾ ವಿಹಾರ್ ಳನ್ನು ಸಂಜೆ 5.20ಕ್ಕೆ ಆಕೆಯ ತಂದೆ ಮನೆಗೆ ಕರೆತರಬೇಕಿತ್ತು. ಆದರೆ ಆ ಸಮಯಕ್ಕೆ ಅಲ್ಲಿ ಮಿತಿ ಮೀರಿದ ಹೋರಾಟ ನಡೆಯುತ್ತಿದ್ದುದ್ದರಿಂದಾಗಿ ಅವರು ಹೋಗಲಾಗಿಲ್ಲ. 

ಆ ಸಮಯದಿಂದ ಮಗಳು ಕಾಣೆಯಾಗಿದ್ದು ಇದುವರೆಗೂ ಆಕೆಯ ಸುಳಿವು ಸಿಕ್ಕಿಲ್ಲ ಎಂದು ಆಕೆಯ ತಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ಸದ್ಯ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದು ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com