ದೆಹಲಿ ಹಿಂಸಾಚಾರ: ಪರೀಕ್ಷೆ ಬರೆಯಲು ಹೋದ ಬಾಲಕಿ ನಾಪತ್ತೆ

ಈಶಾನ್ಯ ದೆಹಲಿಯಲ್ಲಿ ಸಿಎಎ, ಎನ್​ಆರ್​ಸಿ ಪರ ವಿರೋಧದ ಪ್ರತಿಭಟನೆ ವೇಳೆ 13 ವರ್ಷದ ಬಾಲಕಿ ಕಾಣೆಯಾಗಿರುವುದು ವರದಿಯಾಗಿದೆ
ದೆಹಲಿ ಹಿಂಸಾಚಾರ
ದೆಹಲಿ ಹಿಂಸಾಚಾರ

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಸಿಎಎ, ಎನ್​ಆರ್​ಸಿ ಪರ ವಿರೋಧದ ಪ್ರತಿಭಟನೆ ವೇಳೆ 13 ವರ್ಷದ ಬಾಲಕಿ ಕಾಣೆಯಾಗಿರುವುದು ವರದಿಯಾಗಿದೆ.

ಸೋನಿಯಾ ವಿಹಾರದ ಬಳಿ ವಾಸಿಸುತ್ತಿರುವ ಕುಟುಂಬದ 13 ವರ್ಷದ ಹೆಣ್ಣು ಮಗಳು ಸೋಮವಾರದಂದು ಖಜುರಿ ಖಾಸ್​ನಲ್ಲಿರುವ ಶಾಲೆಯಲ್ಲಿ ಪರೀಕ್ಷೆ ಬರೆಯುವುದಕ್ಕಾಗಿ ತೆರಳಿದ್ದಳು.

8ನೇ ತರಗತಿ ಓದುತ್ತಿರುವ  ಸೋನಿಯಾ ವಿಹಾರ್ ಳನ್ನು ಸಂಜೆ 5.20ಕ್ಕೆ ಆಕೆಯ ತಂದೆ ಮನೆಗೆ ಕರೆತರಬೇಕಿತ್ತು. ಆದರೆ ಆ ಸಮಯಕ್ಕೆ ಅಲ್ಲಿ ಮಿತಿ ಮೀರಿದ ಹೋರಾಟ ನಡೆಯುತ್ತಿದ್ದುದ್ದರಿಂದಾಗಿ ಅವರು ಹೋಗಲಾಗಿಲ್ಲ. 

ಆ ಸಮಯದಿಂದ ಮಗಳು ಕಾಣೆಯಾಗಿದ್ದು ಇದುವರೆಗೂ ಆಕೆಯ ಸುಳಿವು ಸಿಕ್ಕಿಲ್ಲ ಎಂದು ಆಕೆಯ ತಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ಸದ್ಯ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದು ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com