ಸಾಲುಮರದ ತಿಮ್ಮಕ್ಕನ ನೆನೆದ ಟೀಂ ಇಂಡಿಯಾ ಕ್ರಿಕೆಟಿಗ, ಕಾರಣ ಏನು ಗೊತ್ತಾ?

ಟೀಂ ಇಂಡಿಯಾದ ಕ್ರಿಕೆಟಿಗರೊಬ್ಬರು ಕರ್ನಾಟಕದ ಸಾಲುಮರದ ತಿಮ್ಮಕ್ಕರನ್ನು ನೆನೆದು ಟ್ವೀಟ್ ಮಾಡಿದ್ದು, ಈ ಟ್ವೀಟ್ ಇದೀಗ ವ್ಯಾಪಕ ವೈರಲ್ ಆಗಿದೆ.
ಸಾಲು ಮರದ ತಿಮ್ಮಕ್ಕ-ಹರ್ಭಜನ್ ಸಿಂಗ್
ಸಾಲು ಮರದ ತಿಮ್ಮಕ್ಕ-ಹರ್ಭಜನ್ ಸಿಂಗ್

ನವದೆಹಲಿ: ಟೀಂ ಇಂಡಿಯಾದ ಕ್ರಿಕೆಟಿಗರೊಬ್ಬರು ಕರ್ನಾಟಕದ ಸಾಲುಮರದ ತಿಮ್ಮಕ್ಕರನ್ನು ನೆನೆದು ಟ್ವೀಟ್ ಮಾಡಿದ್ದು, ಈ ಟ್ವೀಟ್ ಇದೀಗ ವ್ಯಾಪಕ ವೈರಲ್ ಆಗಿದೆ.

ಹೌದು.. ಟೀಂ ಇಂಡಿಯಾದ ಟರ್ಬೊನೇಟರ್ ಹರ್ಭಜನ್ ಸಿಂಗ್ ಮತ್ತೆ ಕರ್ನಾಟಕವನ್ನು ನೆನೆಪು ಮಾಡಿಕೊಂಡಿದ್ದು, ಸಾಲು ಮರದ ತಿಮ್ಮಕ್ಕ ಅವರ ಫೋಟೋವನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿಕೊಂಡು, ‘ಇವರು ಇಲ್ಲಿಯವರೆಗೂ 73 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು ಅವುಗಳನ್ನು ಹೆಮ್ಮರವಾಗಿ ಬೆಳೆಸಿದ್ದಾರೆ. ಇವರ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಕೇವಲ ಒಂದೇ ಒಂದು ಸಸಿಯನ್ನಾದರೂ ನಾವು ನೆಡೋಣ. ಧನ್ಯವಾದಗಳು ಅಜ್ಜಿ’ ಎಂದು ಹರ್ಭಜನ್​ ಟ್ವಿಟ್​ ಮಾಡಿದ್ದಾರೆ.

ಹೀಗೆ ಹರ್ಭಜನ್​ ತಿಮ್ಮಕ್ಕ ಅವರ ಫೋಟೋ ಹಾಕಿಕೊಳ್ಳುತ್ತಿದ್ದಂತೆ, ಸಾಕಷ್ಟು ಕನ್ನಡಿಗರು ಅವರ ಬಗ್ಗೆ ಟ್ವಿಟ್​ ಮಾಡುವ ಮೂಲಕವೇ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿ ಪಡೆದ ಹೆಮ್ಮೆಯ ಕನ್ನಡಿಗರು ಎಂದು ಕೆಲವರು ಕಮೆಂಟ್​ ಮಾಡಿದರೆ, ನಿಮ್ಮ ಈ ಒಂದು ಟ್ವಿಟ್​ನಿಂದ ಕರ್ನಾಟಕದ ತಿಮ್ಮಕ್ಕ ವಿಶ್ವಖ್ಯಾತಿ ಪಡೆದುಕೊಳ್ಳಲಿದ್ದಾರೆ. ಧನ್ಯವಾದಗಳು ಎಂದು ಪ್ರತಿಕ್ರಿಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com