ಮಧ್ಯಪ್ರದೇಶ ವೈರಸ್ ಮಹಾರಾಷ್ಟ್ರ ಪ್ರವೇಶಿಸಲು ಸಾಧ್ಯವಿಲ್ಲ, ಠಾಕ್ರೆ ಸರ್ಕಾರ ಸೇಫ್: ರಾವತ್

ಮಧ್ಯಪ್ರದೇಶ ವೈರಸ್ ಮಹಾರಾಷ್ಟ್ರ ರಾಜ್ಯವನ್ನು ಮುಟ್ಟಲು ಸಾಧ್ಯವಿಲ್ಲ. ಉದ್ದವ್ ಠಾಕ್ರೆ ಸರ್ಕಾರ ಸುರಕ್ಷಿತವಾಗಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಬುಧವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ಸಂಜಯ್ ರಾವತ್
ಸಂಜಯ್ ರಾವತ್

ಮಂಬೈ: ಮಧ್ಯಪ್ರದೇಶ ವೈರಸ್ ಮಹಾರಾಷ್ಟ್ರ ರಾಜ್ಯವನ್ನು ಮುಟ್ಟಲು ಸಾಧ್ಯವಿಲ್ಲ. ಉದ್ದವ್ ಠಾಕ್ರೆ ಸರ್ಕಾರ ಸುರಕ್ಷಿತವಾಗಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಬುಧವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಮಹಾರಾಷ್ಟ್ರ ರಾಜ್ಯದಲ್ಲಿ ಶಿವಸೇನೆ ಎನ್'ಸಿಪಿ ಮತ್ತು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿದ್ದು, ಮಧ್ಯಪ್ರದೇಶ ಸರ್ಕಾರದಲ್ಲಿ ಮೂಡಿರುವ ಬಿರುಕು ಇದೀಗ ಮಹಾರಾಷ್ಟ್ರದತ್ತ ಎಲ್ಲರೂ ಮುಖ ಮಾಡುವಂತೆ ಮಾಡಿದೆ. 

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯ ನೀಡಿರುವ ರಾವತ್, ಮಧ್ಯಪ್ರದೇಶ ವೈರಸ್ ಮಹಾರಾಷ್ಟ್ರ ಪ್ರವೇಶಿಸಲು ಸಾಧ್ಯವಿಲ್ಲ. ಮಹಾರಾಷ್ಟ್ರದ ಶಕ್ತಿಯೇ ಭಿನ್ನವಾಗಿದೆ. 100 ದಿನಗಳ ಹಿಂದೆಯೇ ಇಂತಹ ಯತ್ನಗಳು ವಿಫಲಗೊಂಡಿದ್ದವು. ಮಹಾ ವಿಕಾಸ್ ಅಘಾಡಿ ಬೈಪಾಸ್ ಸರ್ಜರಿ ಮಾಡುವ ಮೂಲಕ ಮಹಾರಾಷ್ಟ್ರವನ್ನು ಉಳಿಸಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com