ಶ್ರೀನಗರ: ಕುಪ್ವಾರಾದ ತಂಗ್ಧರ್ ಸೆಕ್ಟರ್ನ ಗಡಿ ನಿಯಂತ್ರಣಾ ರೇಖೆ (ಎಲ್ಒಸಿ)ಯಲ್ಲಿ ಸೇನಾ ಶಿಬಿರದಲ್ಲಿ ಹಿಮಪಾತ ಅಪ್ಪಳಿಸಿದ ಪರಿಣಾಮ ಓರ್ವ ಸೈನಿಕ ಹುತಾತ್ಮನಾಗಿದ್ದು, ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮಂಗಳವಾರ ರಾತ್ರಿ 8 ಗಂಟೆಗೆ ‘ರೋಶನ್’ ಎಂಬ ಮುನ್ನೆಲೆ ಶಿಬಿರಕ್ಕೆ ಹಿಮಪಾತ ಅಪ್ಪಳಿಸಿದೆ. ಶಿಬಿರದಲ್ಲಿದ್ದ ಮೂವರು ಸೈನಿಕರು ಹಿಮಪಾತದಲ್ಲಿ ಹೂತುಹೋಗಿದ್ದು, ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ನಂತರ, ಸೈನಿಕರಾದ ನಿಖಿಲ್ ಶರ್ಮಾ, ರಮೇಶ್ ಚಂದ್ ಮತ್ತು ಗುರುವಿಂದರ್ ಸಿಂಗ್ ಎಂದು ಗುರುತಿಸಲಾದ ಮೂವರನ್ನು ರಕ್ಷಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
Advertisement